Saturday, May 7, 2022

ಯುದ್ಧನೀತಿ ಮತ್ತು ಅಹಿಂಸೆ(ಆಡಳಿತ ಮತ್ತು ದಂಡನೆ)

 

ಆಡಳಿತ ಮತ್ತು ದಂಡನೆ

ನಾಲ್ಕು ವರ್ಣಗಳಲ್ಲಿ ನಮ್ಮ ಹಿಂದೂ ಸಮಾಜವನ್ನು ಒಗ್ಗೂಡಿಸಲಾಗಿದೆ. ಅವುಗಳಲ್ಲಿ ಕ್ಷತ್ರಿಯರು ಶಕ್ತಿ ಹಾಗು ಸಾಮರ್ಥ್ಯಕ್ಕೆ ಪ್ರತೀಕ. ನಮ್ಮ ಶರೀರದಲ್ಲಿ ಮಿದುಳು ಹೇಗೆ ಜ್ಞಾನಭಂಡಾರವೋ  ಹಾಗೆ ಭುಜಗಳು ಶಕ್ತಿ ಹಾಗೂ ರಕ್ಷಣೆಯ ಪ್ರತೀಕ.  ಆದ್ದರಿಂದ ಕ್ಷತ್ರಿಯರು ಭುಜಬಲದಿಂದ ಸಮಾಜದ ರಕ್ಷಣೆಯನ್ನು ಮಾಡುವವರಾಗಬೇಕು. ಅವರು ಶಕ್ತಿ ಹಾಗೂ ಸಾಮರ್ಥ್ಯಗಳ ಭಂಡಾರವಾಗಬೇಕು. ಧರ್ಮ ಹಾಗೂ ದೇಶದ  ರಕ್ಷಣೆಯ ಭಾರ ಅವರ ಹೆಗಲ ಮೇಲಿರುತ್ತದೆ. ಆದರೆ ರಾಷ್ಟ್ರದ ರಕ್ಷಣೆಯನ್ನು ಅವರು ಯಾವ ರೀತಿಯಾಗಿ ಮಾಡಬಲ್ಲರು ? ಅವರ ಬಹುದೊಡ್ಡ ಪ್ರತಿನಿಧಿ ಹಾಗೂ ಸಮಸ್ತ ರಾಷ್ಟ್ರದ ಗೌರವಸ್ವರೂಪನಾದ ರಾಜ ತನ್ನ ರಾಷ್ಟ್ರದ ರಕ್ಷಣೆಯನ್ನು ಯಾವ ಉಪಾಯದಿಂದ ಮಾಡಬಲ್ಲ ? ತನ್ನ ವೀರವಾಹಿನಿ ಶಕ್ತಿಶಾಲಿ ಸೈನ್ಯದ ಸಹಾಯದಿಂದ. ಒಂದು ವೇಳೆ ರಾಜ ಅಥವಾ ಆಡಳಿತವರ್ಗ ದುರ್ಬಲವಾಗಿದ್ದರೆ, ಶತ್ರುವನ್ನು ಹೆದರಿಸಲು ಅಸಮರ್ಥವಾಗಿದ್ದರೆ ಆ ರಾಜ್ಯ ಸುರಕ್ಷಿತವಾಗಿರಲಾರದು. ಹೊರಗಿನ ಶತ್ರು ಆಕ್ರಮಣ ಮಾಡದಿದ್ದರೂ ಸಹ ರಾಜ್ಯದ ಒಳಗೆಯೇ ಕೊಲೆ, ದರೋಡೆ, ಲೂಟಿ ಗೂಂಡಾಗಿರಿ ಮುಂತಾದವುಗಳಿಂದ ರಾಜ್ಯದ ಆಡಳಿತವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ.  ಆಗ ಅಂತಹ ರಾಜ್ಯದಲ್ಲಿ ಜ್ಞಾನದ ವಿಕಾಸ ಹಾಗೂ ಧರ್ಮದ ಆಚರಣೆ  ಇರಲು ಸಾಧ್ಯವಿಲ್ಲ. ಆದ್ದರಿಂದಲೇ -

 “शस्त्रेण रक्षिते राष्ट्रे शास्त्रचिन्ता प्रवर्तते” ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

ಅರ್ಥಾತ್ ಶಸ್ತ್ರದಿಂದ ರಕ್ಷಣೆ ಮಾಡಲ್ಪಡುವ ರಾಷ್ಟ್ರದಲ್ಲಿ  ಶಾಸ್ತ್ರದ ಚಿಂತನೆ (ಜ್ಞಾನದ ವಿಕಾಸ) ನಡೆಯುತ್ತದೆ. ಆದ್ದರಿಂದಲೇ ಅಧಿಕ ಶಕ್ತಿಶಾಲಿಯಾದ ಶತ್ರುಗಳಿಂದ ವಿಜಯವನ್ನು ಪಡೆಯುವ ಪುರುಷನನ್ನೇ  ರಾಜನನ್ನಾಗಿ ಮಾಡಬೇಕು ಎಂದು ವೆದಗಳು ಆದೆಶಿಸುತ್ತವೆ.

इन्द्रो जयाति न परो जयाता अधिराजो राजसु राजतायै । चर्कृत्य ईढ्यो वन्द्यश्चोपसद्यो नमस्यो भवेह ॥ (अथर्ववेदः ६-१०- १८-१)

ಅರ್ಥಾತ್ ಈ ಮಾನವ ಸಮುದಾಯದಲ್ಲಿ ವೀರನಾದವನು ಇಂದ್ರನಂತೆ ಐಶ್ವರ್ಯಕರ್ತನಾಗಿ ಶತ್ರುಗಳನ್ನು ಗೆಲ್ಲಬೇಕು. ಆತ ಯಾವತ್ತೂ ಶತ್ರುಗಳಿಂದ ಪರಾಜಿತನಾಗಬಾರದು. ಕ್ಷತ್ರಿಯರಲ್ಲಿ ಎಲ್ಲರಿಗಿಂತಲೂ ಎತ್ತರದಲ್ಲಿ ವಿರಾಜಮಾನನಾಗಿ  ಅತ್ಯಂತ ಯೋಗ್ಯ ಪ್ರಶಂಸನೀಯ ಗುಣಗಳಿಂದ  ಕೂಡಿ ಸತ್ಕಾರಯೋಗ್ಯ ಹಾಗು ಮಾನನೀಯನಾಗಿರುವವನನ್ನು ಸಭಾಪತಿಯು ರಾಜನನ್ನಾಗಿ ಮಾಡಬೇಕು.

ಈ ವೆದಮಂತ್ರದಿಂದ ಸ್ಪಷ್ಟವಾಗುವುದೇನೆಂದರೆ ನಮ್ಮ ರಾಷ್ಟ್ರಪತಿ ಅಥವಾ ರಾಜನಲ್ಲಿ ಯಾವ ಗುಣಗಳಿರಬೇಕು ಎಂಬುದಾಗಿ.  ಶತ್ರುವಿನ ಗುಂಡಿಗೆಯನ್ನೊಡೆಯುವ ಯೋಗ್ಯತೆ ಹಾಗೂ ದುಷ್ಟರಿಗೆ ದಂಡನೆಯನ್ನು ನೀಡುವ ಸಾಮರ್ಥ್ಯ ಆತನ ಮೊದಲ ಗುಣವಾಗಿರಬೇಕು.  ಆತನ ಆಡಳಿತಯಂತ್ರ ಸರಿಯಾದ ರೀತಿಯಲ್ಲಿ  ನಡೆಯಬೇಕಾದರೆ ಬಿಗಿಯಾದ ಶಾಸನದಂಡವನ್ನು ಸರಿಯಾಗಿ ಬಳಸಬೇಕು. ನಮ್ಮ ನೀತಿಕಾರರು ಆಡಳಿತವ್ಯವಸ್ಥೆಯನ್ನು ಸರಿಯಾಗಿಸಲು ದಂಡದ ಆವಶ್ಯಕತೆ ಬಹಳವಾಗಿರುವುದನ್ನು ತಿಳಿಸಿದ್ದಾರೆ. ನೋಡಿ, ಮನುಮಹಾರಾಜ  ಮನುಸ್ಮೃತಿಯ ಏಳನೇ ಅಧ್ಯಾಯದಲ್ಲಿ  ಆಡಳಿತದಲ್ಲಿನ ದಂಡದ ವಿಷಯವಾಗಿ ಏನು ಹೇಳಿದ್ದಾನೆ ಅಂತ -

तस्यार्थे सर्वभूतानां गोप्तारं धर्ममात्मजम् ।

ब्रह्मतेजोमयं दण्डमसृजत्पूर्वमीश्वरः ॥

ರಾಜನ ಹಿತಕ್ಕಾಗಿ ಭಗವಂತನು ಮೊದಲು ಪ್ರಾಣಿಗಳ ರಕ್ಷಕನಾದ, ಧರ್ಮರೂಪನಾದ, ಬ್ರಹ್ಮತೆಜಸ್ಸಿನಿಂದ ಕೂಡಿದ ತನ್ನ ಪುತ್ರನಾದ ದಂಡನನ್ನು(ವನ್ನು/ಶಿಕ್ಷೆಯನ್ನು) ಸೃಷ್ಟಿಸಿದ.

तस्य सर्वाणि भूतानि स्थावराणि चराणि च ।

भयाद्भोगाय कल्पन्ते स्वधर्मान्न चलन्ति च ॥

ದಂಡದ ಭಯದಿಂದಾಗಿ ಎಲ್ಲಾ ಚರಾಚರ ಪ್ರಾಣಿಗಳೂ ತಮ್ಮ ತಮ್ಮ ಭೋಗವನ್ನು ಭೋಗಿಸುತ್ತವೆ. ಯಾವುದೂ ಕೂಡ ಧರ್ಮಮಾರ್ಗದಿಂದ ವಿಚಲಿತವಾಗುವುದಿಲ್ಲ.

स राजा पुरुषो दण्डः नेता शासितचेतसः ।

चतुर्णामाश्रमाणाञ्च धर्मस्य प्रतिभूः स्मृतः ॥

ಆ ರಾಜನೇ ದಂಡ/ಶಿಕ್ಷೆ, ದಂಡವೇ ರಾಜ್ಯದ ನೇತಾರ ಮತ್ತು ಶಿಕ್ಷಕ. ಋಷಿಗಳು ದಂಡವನ್ನು/ಶಿಕ್ಷೆಯನ್ನು ನಾಲ್ಕು ಆಶ್ರಮಗಳಲ್ಲಿ ಧರ್ಮದ ಸಾಕ್ಷಿ ಎಂಬುದಾಗಿ ಹೇಳಿದ್ದಾರೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

ದಂಡವೇ ಪ್ರಜೆಗಳನ್ನೆಲ್ಲ ಆಳುತ್ತದೆ. ದಂಡವೇ ಎಲ್ಲ ಪ್ರಾಣಿಗಳ ರಕ್ಷಣೆಯನ್ನು ಮಾಡುತ್ತದೆ. ಎಲ್ಲರೂ ಮಲಗಿರುವಾಗ ದಂಡ ಮಾತ್ರ ಎಚ್ಚೆತ್ತುಕೊಂಡಿರುತ್ತದೆ. ಆದ್ದರಿಂದ ವಿದ್ವಾಂಸರು ದಂಡವನ್ನೇ ಧರ್ಮವೆಂದು ಹೇಳಿರುತ್ತಾರೆ.

यदि न प्रणयेद्राजा दण्डं दण्ड्येष्वतन्द्रितः ।

शूले मत्स्यानिवापश्यन् दुर्बलान् बलवत्तरः ॥

ರಾಜನಾದವನು ಅಲಸ್ಯವನ್ನು ತೊರೆದು ದಂಡನೀಯರಾದವರನ್ನು ದಂಡಿಸದಿದ್ದರೆ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ ಬಲಶಾಲಿಯಾದವನು ದುರ್ಬಲನನ್ನು ಸ್ವಕಾರ್ಯಕ್ಕೆ ಬಲವಂತವಾಗಿ ಬಳಸಿಕೊಂದು ಬದುಕುತ್ತಾನೆ.

सर्वो दण्डजितो लोके दुर्लभो हि शुचिर्नरः ।

दण्डस्य हि भयात्सर्वं जगद्भोगाय कल्पते ॥

ಎಲ್ಲಾ ಜನರೂ ಕೂಡ ದಂಡದಿಂದಲೇ ಗೆಲ್ಲಲ್ಪಡುತ್ತಾರೆ. ಶುದ್ಧಾಚಾರವಂತನಾದ ಮಾನವ ಅತ್ಯಂತ ವಿರಳ. ದಂಡದ ಭಯದಿಂದಲೇ ಜಗತ್ತೆಲ್ಲ ಅನುಭವಿಸಲು ಯೊಗ್ಯವಾಗುತ್ತದೆ.

दुष्येयुः सर्ववर्णाश्च भिद्येरन् सर्वसेतवः ।

सर्वलोकप्रकोपाच्च भवेद्दण्दस्य विभ्रमात् ॥

ದಂಡವಿಲ್ಲದಿದ್ದರೆ ನಾಲ್ಕೂ ವರ್ಣಗಳು ದೂಷಿತವಾಗುವುವು. ಶಾಸ್ತ್ರನಿಯಮಗಳೆಲ್ಲ ನಾಶವಾಗುವುವು. ಪ್ರಜೆಗಳೆಲ್ಲ ದುಃಖಿಗಳಾಗುವರು.

तस्याहुः सम्प्रणेतारं राजानं सत्यवादिनम् ।

समीक्ष्यकारिणं प्राज्ञं धर्मकामार्थकोविदम् 

ದಂಡಿಸುವ ರಾಜನನ್ನು ಸತ್ಯವಾದಿ, ವಿಚಾರಮಾಡಿ ಕೆಲಸ ಮಾಡುವವ, ಬುದ್ಧಿವಂತ, ಹಾಗೂ ಧರ್ಮಾರ್ಥಕಾಮವನ್ನು ಚೆನ್ನಾಗಿ ತಿಳಿದಿರುವವನು ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

स्वराष्ट्रे न्यायवृत्तः स्यात् भृशदण्डश्च शत्रुषु ।

सुहृत्स्वजिह्मः स्निग्धेषु ब्राह्मणेषु क्षमान्वितः ॥

ರಾಜನಾದವನಿಗೆ ತನ್ನ ರಾಜ್ಯದಲ್ಲಿ ನ್ಯಾಯೋಚಿತವಾಗಿ ನಡೆದುಕೊಳ್ಳುವುದು(ದಂಡ ನೀಡುವುದು), ಶತ್ರುಗಳನ್ನು ಚೆನ್ನಾಗಿ ದಂಡಿಸುವುದು, ಪ್ರೀತಿಪಾತ್ರರ ಜೊತೆಗೆ ನಿಷ್ಕಪಟನಂತೆ ವ್ಯವಹರಿಸುವುದು ಹಾಗೂ ಬ್ರಾಹ್ಮಣರಲ್ಲಿ ಕ್ಷಮೆಯನ್ನು ಹೊಂದುವುದು ಯೊಗ್ಯವಾಗಿದೆ.

ಈ ರೀತಿಯಾಗಿ ದುಷ್ಟರನ್ನು ದಂಡಿಸಲು ಬೇಕಾದ ಶಾಸ್ತ್ರೀಯ ಆದೇಶಗಳು  ನಮ್ಮ ಇತರ ಪ್ರಾಚೀನ ಗ್ರಂಥಗಳಲ್ಲಿಯೂ ಹೇರಳವಾಗಿವೆ. ದುಷ್ಟರನ್ನು ಕ್ಷಮಿಸುವುದು ದಯೆ ತೋರಿಸುವುದು ಅಥವಾ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆಯನ್ನು ಕೊಡುವುದು ಮುಂತಾದವುಗಳಿಂದ ದೇಶದಲ್ಲಿ ಯಾವತ್ತೂ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮತ್ತು ಯಾವತ್ತೂ ಧರ್ಮದ ಪಾಲನೆಯಾದಂತಾಗುವುದಿಲ್ಲ. ಮಹಾಭಾರತದ ಶಾಂತಿಪರ್ವದಲ್ಲಿ ಮಹಾರಾಜ ಯುಧಿಷ್ಠಿರನು ಯುದ್ಧದಲ್ಲಾದ ಸಾವುನೋವುಗಳಿಂದ ಉದ್ವಿಗ್ನನಾಗಿ ರಾಜ್ಯವನ್ನು ಬಿಟ್ಟು ಬಿಡುವ  ವಿಚಾರವನ್ನು ಮಾಡುತ್ತಿದ್ದಾಗ ೧೫ನೇ ಸರ್ಗದಲ್ಲಿ ಆತನಿಗೆ ವೀರಪುತ್ರ ಅರ್ಜುನನು  “ಶಾಸನದಂಡ” ಕ್ಕೆ ಸಂಬಂಧಿಸಿದಂತೆ ತಿಳಿಯಪಡಿಸುತ್ತ ಏನು ಹೇಳಿದನೋ ಅದು ಬಹಳ  ಮಹತ್ವಪೂರ್ಣಾವಾಗಿದೆ. ಅದರಿಂದ ಕೆಲವು ಉಪದೇಶಗಳನ್ನು ಇಲ್ಲಿ ಕೊಡಲಾಗಿದೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

दण्डः संरक्षते धर्मं तथैवार्थं जनाधिप ।

कामं संरक्षते दण्डस्त्रिवर्गो दण्ड उच्यते ॥

दण्डेन रक्ष्यते धान्यं धनं दण्डेन रक्ष्यते ।

एवं विद्वन्नुपाधत्स्व भावं पश्यस्व लौकिकम् ॥

ಪ್ರಜೆಗಳನ್ನು ಆಳುವುದು ಮತ್ತು ಪೋಷಿಸುವುದು  ದಂಡವೇ. ಜಗವೆಲ್ಲ ಮಲಗಿರಲು ದಂಡವೊದೇ ಎಚ್ಚೆತ್ತಿರುವುದು. ಆದ್ದರಿಂದಲೇ ಪಂಡಿತರು ದಂಡವನ್ನು ಧರ್ಮವೆಂದಿದ್ದಾರೆ.

ದಂಡವು ಧರ್ಮವನ್ನು ಸಂರಕ್ಷಿಸುತ್ತದೆ. ಅರ್ಥವನ್ನು ಕಾಪಾಡುತ್ತದೆ. ಕಾಮವನ್ನು ಪೋಷಿಸುತ್ತದೆ. ಆದ್ದರಿಂದ ದಂಡವನ್ನು ತ್ರಿವರ್ಗವೆಂದು ಕರೆಯಲಾಗುತ್ತದೆ.

ದಂಡದಿಂಡ ಧನಧಾನ್ಯಗಳ ರಕ್ಷಣೆಯಾಗುತ್ತದೆ. ಆದ್ದರಿಂದ ಹೇ ರಾಜೇಂದ್ರ,  ಹೀಗೆಯೇ ಲೊಕರಕ್ಷಾಸ್ವರೂಪವಾದ ದಂಡವನ್ನು ಹಿಡಿದು ಲೌಕಿಕಭಾವವನ್ನು ಹೊಂದುವಂತವನಾಗು.

नान्यतः कीर्तिरस्तीह न वित्तं न पुनः प्रजाः ।

इन्द्रो वृत्त्रवधेनैव महेन्द्रः समपद्यत ॥

ರಾಜರುಗಳು ತಮ್ಮ ಶತ್ರುಗಳನ್ನು ಮುಗಿಸದಿದ್ದರೆ ಅವರ ಸಂಪತ್ತು ಕೀರ್ತಿ ಹಾಗೂ ಪ್ರಜೆಗಳು ಸ್ಥಾಯಿಯಾಗುಳಿಯುವುದಿಲ್ಲ. ಇಂದ್ರನು ವೃತ್ರಾಸುರನನ್ನು ಕೊಂದಿದ್ದಿಂದಲೇ ಮಹೇಂದ್ರನೆಂದು ಪ್ರಸಿದ್ಧನಾದ.

 

दण्डनीत्यां प्रणीतायां सर्वे सर्वे सिध्यन्त्युपक्रमाः ।

कौन्तेय सर्वभूतानां तत्र मे नास्ति संशयः ॥

दण्दश्चेन्न भवेल्लोके विनश्येयुरिमाः प्रजाः ।

जले मत्स्यानिवाभक्षन् दुर्बलान् बलवत्तरः ॥

 

दण्डे स्थिताः प्रजाः सर्वाः भयं दण्डे विदुर्बुधाः ।

दण्डे स्वर्गो मनुष्याणां लोकोयं सुप्रतिष्ठितः ॥

न तत्र कूटं पापं या वञ्चना वापि दृश्यते ।

यत्र दण्डः सुविहितश्चरत्यरिविनाशनः ॥

No comments:

Post a Comment