Thursday, November 27, 2025

ಅಜ್ಞಾನ ಮತ್ತು ಕಾಪಟ್ಯ ಗಳ ಮದುವೆ.

ಇಂದು ಪ್ರಯಾಗರಾಜ್ ನಲ್ಲಿರೋ ಆನಂದಭವನಕ್ಕೆ ಭೇಟಿ ನೀಡಿದೆ. ಅಲ್ಲಿನ ಚಿತ್ರಶಾಲೆ ನೋಡಿದೆ. ಭಾರತ ಸಂಕಷ್ಟದಲ್ಲಿದ್ದರೂ ಭಾರತೀಯನ ನೆಮ್ಮದಿಗೆ ಕೊರತೆಯಿಲ್ಲ ಎಂದು ಬ್ರಿಟಿಷರಿಗೆ ಸಾರುತ್ತಿರುವಂತಿರುವ ನೆಹರುರವರ ಯಶೋಗಾಥೆಯ‌ ಚಿತ್ರಗಳ  ನೋಡಿ ಬೆರಗಾದೆ!! ದೇಶವನ್ನು ತಮ್ಮ ಮನೆಯೆಂದು ಭಾವಿಸಿ ಬದುಕಿದ ಪಂಡಿತರ ಧೀಮಂತಿಕೆಗೆ ಮಾರು ಹೋದೆ!!!

ಇದು 20 ನವಂಬರ್ 2025 ರಂದು ರಾಘವೇಂದ್ರ ಭಟ್ ಫೇಸ್ಬುಕ್ ನಲ್ಲಿ ಬರೆದದ್ದು. ಅಡ್ಡಗ್ಗದ್ದೆ ನಾಗರಾಜ "ನೆಹರೂ ನನ್ನು ಹೊಗಳುವ ಇವರು ಶಿಕ್ಷಿತರ ಅಂತ ಅನುಮಾನ. ಛಿ" ಅಂತ ಕಾಮೆಂಟ್ ನ ಜೊತೆಗೆ ನನಗೆ ಕಳಿಸಿದ್ದು.

ಹೌದು. ಇದು ಅಜ್ಞಾನ ಮಾತ್ರ ಅಲ್ಲ. ರಾಹುಲನಂತೆ ಅಜ್ಞಾನದ ಮುಖವಾಡವಿರುವ ಕಾಪಟ್ಯದ ಕಂಟಕ.
ಯಾಕೆಂದರೆ -
1962 ನೇ ಇಸವಿಯಲ್ಲಿ   ಥಗ್ಲಾ ಪರ್ವತದ ಹಿಂದೆ ಅತ್ಯಾಧುನಿಕ ಶಸ್ತ್ರಗಳೊಂದಿಗೆ ಕುಳಿತಿದ್ದ ಚೀನಾ ದೇಶದ 20 ಸಾವಿರ ಸೈನಿಕರೊಂದಿಗೆ ಹೊಡೆದಾಡಲು ನೆಹರು ಬರೀಗೈಲಿ ಕಾಲ್ನಡಿಗೆಯಲ್ಲಿ ಕಳಿಸಿದ್ದು ಅರ್ಧ ಬ್ರಿಗೇಡ್ ಸೈನ್ಯ. ಅಂದರೆ ಕೇವಲ 2 ಸಾವಿರ ಸೈನಿಕರು. ಸೈನಿಕರಿಗಂತೂ ಹೋಗಲು ವಿಮಾನವಿಲ್ಲ. ಬ್ರಿಗೇಡ್ ನ ನಾಯಕನಾದ ಬ್ರಿಗೇಡಿಯರ್ ಗೂ ಅದೇ ಗತಿ. 

ಆದರೆ ಅದೇ ವರ್ಷ ಕಾಂಗೋ ಗಣರಾಜ್ಯಕ್ಕೆ ಅಲ್ಲಿ ಯಾರೋ 114 ಮಂದಿ ಸ್ಥಳೀಯ ಪುಂಡರು ಅಲ್ಲಿನ ಎರ್ಪೋರ್ಟ್ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವುದನ್ನು ತಡೆಯಲು ಶಾಂತಿಪಾಲನಪಡೆಯ ಹೆಸರಲ್ಲಿ ವಿಮಾನದಲ್ಲಿ ಕಳುಹಿಸಿದ್ದು ಬರೋಬ್ಬರಿ 4 ಸಾವಿರ ಶಸ್ತ್ರ  ಸಜ್ಜಿತ ಸೈನಿಕರನ್ನು.

ಈ ರೀತಿಯಾಗಿ  ಜಾಗತಿಕವಾಗಿ ಪ್ರಶಂಸೆಯ ಕಿರೀಟವನ್ನು ತೊಟ್ಟುಕೊಳ್ಳುವ ಸಲುವಾಗಿ  ತನ್ನ ದೇಶವನ್ನು  ತಾನೇ ಸೋಲಿಸುವ ನೆಹರೂನ ನಡೆಯಿಂದ ಬುದ್ಧಿ ಕಲಿಯದ ಕೆಲವು ಪ್ರೊಫೆಸರ್ ಗಳು ಆತನನ್ನೇ ಆರಾಧಿಸುವ ಪರಿ ಬರಿ ಬಾಲಿಷ ಮಾತ್ರ ಅಲ್ಲ, ಕಪಟವೂ ಕೂಡ ಅಲ್ಲವೇ?.

ಇಂತಹ ಮನುಷ್ಯ ಪ್ರಧಾನಿಯಾಗಿದ್ದೇ ಅಪ್ರಜಾತಾಂತ್ರಿಕವಾದ ಕಾಪಟ್ಯದ ವಿಧಾನದಿಂದ.

 ಮೊದಲ ಪ್ರಧಾನಿಯಾಗಿ  ಸುದೀರ್ಘ ದಾಸ್ಯಕ್ಕೆ ಒಳಗಾಗಿದ್ದ ದೇಶದ ಪ್ರಜೆಗಳನ್ನು ಸಮುಚಿತ ಶಿಕ್ಷಣದ ಮೂಲಕ ಸ್ವತಂತ್ರ ಚಿಂತನಾಶಕ್ತಿಯೊಂದಿಗೆ ಸಮೃದ್ಧ ಜೀವನ ನಡೆಸುವಂತೆ ಮಾಡಬೇಕಾದವ ಒಬ್ಬರ ಮೇಲೊಬ್ಬರಂತೆ 5 ಮುಸಲ್ಮಾನ್ ಶಿಕ್ಷಣ ಮಂತ್ರಿಗಳನ್ನು ಸಂಪುಟದಲ್ಲಿ ಸೇರಿಸಿದ ಉದ್ದೇಶ ಏನು ಅಂತ ನಮಗೆ ತಿಳಿಯುವುದಿಲ್ಲವೇ?
ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಶಾಶ್ವತವಾಗಿ ಉಳಿಯಲು ಯಾರು ಕಾರಣ? 370ನೇ ವಿಧಿಯನ್ನು ರೂಪಿಸಿ 70 ವರ್ಷ ಅದು ಜೀವಂತವಾಗಿ ಉಳಿದು, ದೇಶದ ಖಜಾನೆಯಿಂದ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು  ಭಾರತದ ರಕ್ತ ಹೀರುವವರಿಗೆ ಕೊಡುವಂತೆ ಸಂಕಲ್ಪಿಸಿ ಕಾರ್ಯಗತಗೊಳಿಸಿದ್ದು ಯಾರು? ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ನ ಜನತೆ ಭಾರತಡೊಡನೆ ವಿಲೀನವಾಗಲು ಬಯಸಿದಾಗ ನಿರಾಕರಿಸಿದ್ದು ಯಾರು?
ಹೈದರಾಬಾದ್ ನ ನಿಜಾಮ ಪಾಕಿಸ್ತಾನ ದಿಂದ ವಿಮಾನ ಗಳ ಮೂಲಕ ರಾತೋ ರಾತ್ರಿ ಶಸ್ತ್ರಾಸ್ತ್ರ  ತರಿಸಿಕೊಳ್ಳುತ್ತ ಹಿಂದೂಗಳ ನರಮೇಧ ಮಾಡುತ್ತಿದ್ದಾಗ ಭಾರತೀಯ ಸೇನೆಯನ್ನು ತಡೆದು ನಿಲ್ಲಿಸಿದ್ದು ಯಾರು?

ಜುನಾಗಡ್  ನ ವಿಮೋಚನೆಯಲ್ಲಿ , ಭೋಪಾಲ್ ನ ವಿಮೋಚನೆಯಲ್ಲಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದು ಕೊಂಡವರು ಯಾರು?
ಸೋಮನಾಥ ಮಂದಿರದ ಪುನರ್ನಿರ್ಮಾಣ ಸಾವಿರ ವರ್ಷಗಳ ಬಳಿಕ  ದೇಶಕ್ಕೆ ಒದಗಿದ ಗುಲಾಮಿತನದ ವಿರುದ್ಧದ ದೇಶದ ಸ್ವಾಭಿಮಾನದ ಪರಮ ವೈಭವದ ಕ್ಷಣವನ್ನು ಸಾಕ್ಷಾತ್ಕರಿಸಿಕೊಳ್ಳುವ ಅವಕಾಶ. ಇದು ಸ್ವತಂತ್ರ ಭಾರತದಲ್ಲಿ ಸರ್ಕಾರಿ ಖರ್ಚುನಲ್ಲೇ ಆಗಬೇಕಾಗಿದ್ದ ಕೆಲಸ. 
ಆದರೆ ಆ ನೀಚ ಬುದ್ಧಿಯ ವ್ಯಕ್ತಿ ಖಜಾನೆಯಿಂದ ಖರ್ಚು ಮಾಡಲು ನಿರಾಕರಿಸಿದ್ದಲ್ಲದೆ,  ದೇಶದ ಅಗಿನ ರಾಷ್ಟ್ರಪತಿಯೂ ಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸದಂತೆ ತಡೆಯಲು ಯತ್ನಿಸಿದ್ದು ಒಬ್ಬ ದೇಶದ ಸ್ವಾಭಿಮಾನಿ ಪ್ರಜೆಯಾಗಿ ಹೇಗೆ ನಾನು ಸಹಿಸಿಕೊಳ್ಳಲಿ?

ನೇಪಾಳದ ರಾಜ ತ್ರಿಭುವನ್ ಭಾರತದೊಂದಿಗೆ ಒಂದು ರಾಜ್ಯವಾಗಿ ನೇಪಾಲವನ್ನು ವಿಲೀನಗೊಳಿಸಲು ಪ್ರಸ್ತಾಪಿಸಿದಾಗ ತಿರಸ್ಕರಿದ ನೆಹರೂ, ಭಾರತದ 10 ಸಾವಿರ ಸೈನಿಕಬಲದೊಂದಿಗೆ ರಕ್ಷಿಸಲ್ಪಡುತ್ತಿದ್ದ ಟಿಬೇಟ್ ನ್ನು ಚೀನಾಕ್ಕೆ ಬೆಳ್ಳಿತಟ್ಟೆಯಲ್ಲಿಟ್ಟು ಕೊಟ್ಟ ನೆಹರೂ, ಬಾಂಗ್ಲಾದೇಶದ ಹಿಂದೂ ಬಾಹುಲ್ಯದ ಒಂದು ಜಿಲ್ಲೆಯವರು ಭಾರತದ ಒಕ್ಕೂಟ ದೊಂದಿಗೆ ವಿಲೀನವಾಗಲು ಬಯಸಿದಾಗ ನಿರಾಕರಿಸಿದ ನೆಹರೂ, ಡೈರೆಕ್ಟ್ ಆಕ್ಷನ್ ಮಾಡಲು ಹೊರಟ ಜಿನ್ನಾನ ತುರುಕರನ್ನು  ಮಟ್ಟ ಹಾಕದೆ, ಅದನ್ನೆದುರಿಸಲು ನೌಖಾಲಿಯಲ್ಲಿ ಎದ್ದು ನಿಂತ ಹಿಂದೂಗಳ ಮೇಲೆ ಬಾಂಬ್ ಹಾಕುವ ಬೆದರಿಕೆಯನ್ನೊಡ್ಡಿದ ನೆಹರೂ,...... ಅದ್ಹೇಗೆ ಧೀಮಂತ ನಾಯಕನಾಗಬಲ್ಲ?
ಅವನಿದ್ದಾಗ ಅದ್ಹೇಗೆ ಒಬ್ಬ ನಿಜವಾದ ಭಾರತೀಯ ಅಪ್ಪನಿಗೆ ಹುಟ್ಟಿದ ಹಿಂದು ನೆಮ್ಮದಿಯ ದಿನವನ್ನು ಕಳೆಯಬಲ್ಲ?
ಇದು ( ನೆಹರು ಧೀಮಂತ ವ್ಯಕ್ತಿ ಎನ್ನುವ ಮಾತು ) ಕಾಪಟ್ಯವಲ್ಲದೆ ಮತ್ತೇನು?