Thursday, May 12, 2022

ಯುದ್ಧನೀತಿ ಮತ್ತು ಅಹಿಂಸೆ (8 ಚಿತ್ತೋಡದ ಚಿತೆ)

 

8 ಚಿತ್ತೋಡದ ಚಿತೆ

ಚಿತ್ತೋಡದ ರಾಜ ರಾಣಾ ಭೀಮಸಿಂಗ್ ಮತ್ತು ಆತನ ರಾಣಿ ಪದ್ಮಿನಿಯ ಕಥೆ ಎಲ್ಲರಿಗೂ ತಿಳಿದಿದೆ. ರಜಪೂತರ ವೀರಗಾಥೆಗಳು  ಜಗತ್ಪ್ರಸಿದ್ಧವಾಗಿವೆ.  ಆದ್ದರಿಂದಲೇ ಕರ್ನಲ್ ಟಾಂಡ್ ತಾನು ಬರೆದ “ರಾಜಸ್ಥಾನದ ಇತಿಹಾಸ”ದಲ್ಲಿ ಹೇಳ್ತಾನೆ – “ಅರಾವಳಿ ಪರ್ವತದ ಯಾವುದೇ ಕಂದರವೂ/ಬೆಟ್ಟವೂ ಕೂಡ ಥರ್ಮೋಪೋಲಿ ಬೆಟ್ಟಕ್ಕಿಂತ ಕಡಿಮೆ ಇಲ್ಲ” ಮಣ್ಣಿನ ಕಣ ಕಣಗಳಲ್ಲಿ ರಜಪೂತರ ಶೌರ್ಯದ ಕಥೆಯನ್ನು ಬರೆಯದೆ ಇರುವ  ಒಂದೇ ಒಂದು ಇಂಚು ಭೂಮಿಯೂ ಕೂಡ  ರಾಜಸ್ಥಾನದಲ್ಲಿ ಇಲ್ಲ. ಆದರೂ ರಜಪೂತರಂತಹ ವೀರರೂ ಸಹ ಪರಸ್ಪರ ವೈರ ಹಾಗೂ ಮೌಢ್ಯದಿಂದಾಗಿ ಇಂತಹ ದುರ್ಗತಿಯನ್ನು ಹೊಂದಬೇಕಾಗಿ ಬಂದದ್ದರಿಂದ ದುಃಖವುಂಟಾಗುತ್ತದೆ. ರಾಣಾ ಭೀಮಸಿಂಗ್ ನ ಕಾಲದಲ್ಲಿ ಕ್ಷತ್ರಿಯ ವೀರರು ಕಮ್ಮಿ ಇದ್ದರೇನು ?  ಅಲ್ಲಾವುದ್ದೀನನ ಬಳಿಯಲ್ಲಿ ಇವರಿಗಿಂತ ದೊಡ್ಡ ವೀರರಿದ್ದರೇ? ಇಲ್ಲ. ಆದರೂ  ಚಿತ್ತೋಡದ ಪತನವೇಕಾಯಿತು ?  ಮತ್ತೆ ಮಹಾರಾಣಿ ಪದ್ಮಿನಿ ೧೬ ಸಾವಿರ ಕ್ಷತ್ರಿಯ ಸ್ತ್ರೀಯರೊಂದಿಗೆ   ಸಜೀವವಾಗಿ ಚಿತೆಗೆ ಏಕೆ ಹಾರಬೇಕಾಗಿ ಬಂತು ? ಕೇವಲ ರಜಪೂತರ ತಪ್ಪು ಹಾಗು ಮೊಂಡುತನದಿಂದಾಗಿ ಕಪಟ ಶತ್ರುಗಳ ಮೇಲೂ  ದಯೆಯನ್ನು ತೋರಿಸುತ್ತಿದ್ದರು.  ಮತ್ತು ಅವರು ಬೀಸಿದ ಬಲೆಗೆ ಬಿದ್ದು ಬಿಡುತ್ತಿದ್ದರು. ಅವರು ರಾಜಕೀಯದ ಈ ಮಾತನ್ನು ಮರೆತಿದ್ದರು –

ದಂಡೇನೋಪನತಂ  ಶತ್ರುಮನುಗೃಹ್ಣಾತಿ ಯೊ ನರಃ |

ಸ ಮೃತ್ಯುಮುಪಗೃಹ್ಣೀಯಾತ್ ಗರ್ಭಮಶ್ವತರೀ ಯಥಾ || ಮಹಾಭಾರತ ಆದಿಪರ್ವ ೧೪೨/೮೪

ಅರ್ಥಾತ್ ಸೆರೆ ಸಿಕ್ಕ ವೈರಿಯ ಮೇಲೆ ಯಾರು ದಯೆಯನ್ನು ತೋರಿಸುತ್ತಾರೆಯೋ  ಅವರು ಹೇಸರಗತ್ತೆಯ ಗರ್ಭದಂತೆ ಮರಣವನ್ನಪ್ಪುತ್ತಾರೆ.

ಯಾವ ತಪ್ಪನ್ನು ಸೆರೆ ಸಿಕ್ಕ ಘೋರಿ ಮಹಮ್ಮದನನ್ನು ಬಿಡುವುದರ ಮೂಲಕ ಪೃಥ್ವೀರಾಜನ ವಂಶಜರು  ಮಾಡಿದರೋ,  ಹಾಗೆಯೇ  ಅದೇ ಅವರ ವಿನಾಶಕ್ಕೆ ಕಾರಣವಾಯಿತೋ, ಅಂತಹುದೇ ತಪ್ಪನ್ನು ಚಿತ್ತೋಡದ ರಾಜನಾದ ಭೀಮಸಿಂಗನು  ಬಾದಶಹ ಅಲ್ಲಾವುದ್ದೀನ ಖಿಲ್ಜಿಯನ್ನು ಆ ಸಮಯದಲ್ಲಿ ಬಂಧಿಸದೆ ಇರುವುದರ ಮೂಲಕ ಮಾಡಿದ. ಆವಾಗ ಖಿಲ್ಜಿಯು  ಚಿತ್ತೋಡದ ಕೋಟೆಯಲ್ಲಿರುವ ರಾಣಿ ಪದ್ಮಿನಿಯನ್ನು ನೋಡಲು ಹೊರಟಿದ್ದ. ಒಬ್ಬ ಶತ್ರುವು  ಮಹಾರಾಣಿಯನ್ನು ಅಪಹರಿಸಲು ಕೋಟೆಯನ್ನು ನಾಶಗೊಳಿಸುತ್ತಿದ್ದರೆ ಅವನಿಗೆ ಅದೆಂಥಾ ದಯೆ ? ಇದಕ್ಕೆ ಬದಲಾಗಿ ಯಾವಾಗ ಅಲ್ಲಾವುದ್ದೀನನಿಗೆ ಅವಕಾಶ ಸಿಕ್ಕಿತೋ ಆಗ ಅವನು ದಯೆಯನ್ನು ತೋರಿಸಲಿಲ್ಲ. ಮತ್ತು ಅವನನ್ನು ತಲುಪಿಸಲು ಹೊರಟ ಭೀಮಸಿಂಹನನ್ನೇ ಬಂಧಿಸಿದ.

ಹ್ಹಾಂ ! ರಾಣಾನಿಗಿಂತ ಹೆಚ್ಚು ನೀತಿ ನಿಪುಣತೆ ರಾಣಿ ಪದ್ಮಿನಿಗೆ ಇತ್ತು. ಆಕೆ ೭೦೦ ಪಲ್ಲಕಿಗಳ ಒಳಗೆ ರಜಪೂತರನ್ನು ಕೂರಿಸಿ ಅಲ್ಲಾವುದ್ದೀನನ ಡೇರೆಯೊಳಗೆ ಕಳುಹಿಸಿ ಅಲ್ಲಿ ಬಡಿದಾಡಿಸಿ ತನ್ನ ಪತಿಯನ್ನು ಅಲ್ಲಾವುದ್ದೀನನಿಂದ  ಬಿಡಿಸಿ ತಂದಳು. ಆದರೆ ಆಕೆಯೂ ಕೋಪದಲ್ಲಿ ತಪ್ಪೊಂದನ್ನು ಎಸಗಿದಳು. ಅಲ್ಲಾವುದ್ದೀನನ ಡೇರೆಯಲ್ಲಿ ಒಂದೇ ಸಮನೆ  ಕತ್ತಿ ಹೊರಗೆಳೆದು “ರೇ ಕಾಮುಕ, ಮ್ಲೇಚ್ಛ ನೀನು ಯಾವಳನ್ನು ಬಯಸಿದ್ದೆಯೋ ಅವಳು ನಿನ್ನ ಮುಂದೆಯೇ  ನಿಂತಿದ್ದಾಳೆ. ಕ್ಷತ್ರಿಯ ಹೆಂಗಸು ಬರಿಗೈಯವನೊಂದಿಗೆ ಯುದ್ಧ ಮಾಡುವುದಿಲ್ಲ. ತಗೋ ಕತ್ತಿ!” ಎಂದು ಗರ್ಜಿಸಿದಳು. ಅಲ್ಲಾವುದ್ದೀನ್ ಅದರಿಂದ ಹೆದರಿ ಮೂರ್ಛೆ ಹೋಗಿ ಬಿದ್ದು ಬಿಟ್ಟ. ಪದ್ಮಿನಿ ಅವನ ಶಸ್ತ್ರವಿಲ್ಲದಿರುವಿಕೆಯನ್ನು ಹಾಗೂ ಮೂರ್ಛಾವಸ್ಥೆಯಲ್ಲಿರುವುದನ್ನು ತಿಳಿದು ಆತನನ್ನು ಅಲ್ಲೇ ಬಿಟ್ಟು ನಡೆದಳು. ಪದ್ಮಿನಿಯು ಮಾಡಿದ ಈ ತಪ್ಪು ಆಕೆಯ ಮತ್ತು ಚಿತ್ತೋಡದ ನಾಶಕ್ಕೆ ಕಾರಣವಾಯಿತು. ಶತ್ರುವಿನ ಮೇಲೆ ಅದೆಂಥಹ ದಯೆ ?  ಅವಳು ಅಲ್ಲೇ ಅಲ್ಲಾವುದ್ದೀನನನ್ನು ಮುಗಿಸಿಬಿಡಬೇಕಿತ್ತು. ಹಾಗೆ ಮಾಡಿದ್ದಿದ್ದರೆ ಮುಂದೆ ಭಾರತದ ಇತಿಹಾಸವೇ ಬದಲಾಗಿ ಬಿಡುತ್ತಿತ್ತು. ಮತ್ತು ಭಯಂಕರವಾದ ಚಿತ್ತೋಡದ ಚಿತೆ ಉರಿಯುತ್ತಿರಲಿಲ್ಲ.

No comments:

Post a Comment