Wednesday, May 8, 2024

भारतस्य विकासे संस्कृतस्य योगदानम्

 

भारतस्य विकासे संस्कृतस्य योगदानम्

विकसितस्य देशस्य लक्षणं किम् ? आर्थिकी प्रगतिरेव विकासो वा ?  आर्थिकी प्रगतिरपि कियत्या मात्रया स्यात् येन प्रगतिरभवदिति परिगण्यते ?  देशस्य कोषः समृद्धः चेत् विकसितः देशः इति तात्पर्यं किम् ?  काश्चन प्रजाः निरुद्योगिन्यः सन्ति चेत् देशः विकसितः नास्ति इति वक्तुं शक्यते  किम् ? प्रगतेः विकासस्य वा मानदण्डः कः ? इत्यादयः नैके प्रश्नाः सन्दर्भेऽस्मिन् उत्पद्यन्ते ।

संस्कृते काचित् उक्तिरस्ति

मनसि च परितुष्टे कोऽर्थवान् को दरिद्रःइति । कश्चन जनः यथा धनाभावेऽपि सन्तोषेण शान्त्या च जीवति तथैव देशोऽपि शान्त्या सन्तुष्टप्रजाभिः चलति चेत् तदपेक्षया कीदृशी समृद्धिरपेक्षिता स्यात् ? यतो हि “सन्तोष एव पुरुषस्य परं निधानम्” किल ।

अस्य नेदमस्ति तात्पर्यं यत् भौतिकी समृद्धिः नापेक्षिता/उपेक्षणीया इति, सर्वेऽपि विरागिणः सन्तः शमदमादिना सर्वे तुष्यन्तु चेति । भौतिकी समृद्धिः अवश्यं साधनीया एव । किन्तु तेन सहैव मनुष्यः सर्वैः आयामैः सन्तृप्तिं यथा भजेत तथा उपायाः अपि चिन्तनीयाः ।

जिहाद-क्रुसेड-माओइजम्-सदृशाः हिंसाप्रवृत्तयः भौतिकसमृद्धिरस्ति चेदपि मनुष्यस्य सन्तोषमपकर्षन्ति । समाजे उच्चनीचादिभेदाः कदाचित् सामाजिकीम् अशान्तिम् उत्पादयन्ति । वामचिन्तनस्य उत्पत्तौ इदमपि एकं बीजमस्ति । मतीयविभ्रान्तिः मतीयोन्मादः च समाजे अशान्तिं जनयतः । अतः भौतिकसमृद्ध्या सह एतादृशानाम् अशान्तिजनकानां तत्वानाम् अपि निर्मूलनाय संस्कृते किमौषधमस्ति इति अत्र चिन्तनीयमस्ति ।

भौतिकसमृद्धिः मेधया नियमितपरिश्रमेण च भवति । एतदर्थं संस्कृतवाङ्मये विफुलाः उपायाः प्रेरकतत्त्वानि च प्रादर्शिषत । यथा –

कृतं मे दक्षिणे हस्ते जयो मे सव्य आहितः ॥ (अथर्ववेदः ७-५२-८)

न हि सुप्तस्य सिंहस्य प्रविशन्ति मुखे मृगाः ॥ हितोपदेशः ।

 तन्त्रज्ञानस्य अभावे अपि विजयनगरसाम्राज्यस्य काले, विक्रमादित्यस्य काले, ललितादित्यस्य काले, राजराजचोळस्य काले, इतिहासस्य अन्यान्यसमये समृद्धिरासीत् ।  “शस्त्रेण रक्षिते राष्ट्रे शास्त्रचिन्ता प्रवर्तते”  इत्युक्त्यनुगुणं भारते शस्त्राभ्यासेन सह शास्त्राध्यनमपि विधाय देशस्य समृद्धिं शान्तिं च सम्पादयितुम् अपेक्षिता शिक्षाव्यवस्था भारते आसीत् । तदर्थं चतुष्षष्ठिकलाः अध्येयविषयाः आसन् । परापरविद्ययोः समानरूपेण प्राप्तेः व्यवस्था आसीत् ।  येन अभ्युदयनिश्रेयसयोः सम्प्राप्तिः सरला स्यात् , भौतिकसमृद्ध्या सह पारमार्थिकं सुखमवाप्तुं परमपुरुषार्थस्य द्बारं समेषाम् उद्घाटितमासीत्, न केवलं पुरुषाणाम्, न वा केवलं निर्दिष्टानाम् मतावलम्बिनाम् । विद्याप्राप्त्यधिकारः भारते कस्यचित् जातिविशेषस्य इति नासीत्, सर्वजातीयाः जनाः अत्र (आङ्ग्लेयानाम् भारते आगमनपर्यन्तम् अपि) तरतमभावेन विना एव अधीतये स्म चेति  थामस्-मुन्रो-प्रभृतीनां सर्वेक्षणस्य प्रतिवेदनेन स्पष्टम् अस्ति ।

भारतं पूर्वं निरन्तरम् आक्रामकानां लुण्ठनस्य लक्ष्यं भारतमासीत् इत्यस्य कारणं भारते महती समृद्धिः  साधिता आसीत् इति ।  किन्तु तादृशी समृद्धिः स्वमेधया परिश्रमेण च विना न कदापि साधिता आसीत् । एषा मेधा एव अस्माकं संस्कृतवाङ्मयमस्ति ।  परिश्रमार्थं प्रेरणापि तदेवास्ति ।  अत एव अत्र भूगोलात् खगोलपर्यन्तं, वैद्यकात् ब्रह्मविद्यापर्यन्तम्, वाजीकरणतन्त्रात् यन्त्रमाधवपर्यन्तम्, अणिमाद्यष्टसिद्धितः परब्रह्मप्राप्तिपर्यन्तं विद्यास्थानानि देशस्य सर्वेषु आयामेषु समृद्धिं साधयितुमेव आसन् । अतः भारतीयानि सर्वाण्यपि विद्यास्थानानि समरसतापूर्णरीत्या देशस्य विकासं साधयितुं सम्प्रत्यपि योग्यानि सन्ति इत्यत्र नास्ति संशीतिः ।

प्रो.हरिप्रसादः के.

शिक्षाविभागः, राजीवगान्धीपरिसरः

Monday, May 6, 2024

6/5/2024 ಇವತ್ತಿನ ಸಂತಸದ ಸುದ್ದಿ

 

ಸಂತಸದ ಸುದ್ದಿ

ಇವತ್ತು ಒಂದು ಸಂತಸದ ಸುದ್ದಿ ಇದೆ. ದೇವರು ನಿಜವಾಗಲೂ ಇದ್ದೇನೆಂದು ಅದೆಷ್ಟು ಬಾರಿ ಸಾಬೀತುಪಡಿಸ್ತಾನೆ ಅಂತ ಆಶ್ಚರ್ಯ ಆಗುತ್ತದೆ.

ಇವತ್ತು ಸಂಜೆ ೫.೪೫ ರ ಸಮಯ. ಕಾಲೇಜಿನಲ್ಲಿ ಇನ್ನೇನು ನಾನು ನನ್ನ ಕಂಪ್ಯೂಟರ್ ಶಟ್ ಡೌನ್ ಮಾಡಿ ಬ್ಯಾಗಿಗೆ ತುಂಬಿಸುವುದರಲ್ಲಿದ್ದೆ. ಆಗ ನಮ್ಮ ಪ್ರೊ.ಚಂದ್ರಕಾಂತ ಭಟ್ಟರು ನಮ್ಮ ವಿಭಾಗದ ಒಳಗೆ ಬಂದರು. ಒಂದು ಲವ್ ಲೆಟರ್ ನ ಸುದ್ದಿ ಇದೆ. ಗೊತ್ತಾಗಿದೆಯಾ ಅಂತ ಕೇಳಿದರು. ನಾನು ಊಹೆ ಮಾಡಿದ್ದು ಪ್ರಾಯಶಃ ಅದೇ ಸುಬ್ರಾಯ ಭಟ್ಟರ ಏನೋ ವಿಚಾರ ಇರಬಹುದು ಅಂತ. ನಾನು ಗೊತ್ತಿಲ್ಲ ಅಂದೆ.

ನಮ್ಮ ಕ್ಯಾಂಪಸ್ ಡೈರೆಕ್ಟರ್ ಪ್ರೊ. ಹಂಸಧರ ಝಾ ಹೇಳಿದರು ಅಂತ ಅವ್ರು ಆರಂಭಿಸಿದ್ರು – ಒಂದು ಲೆಟರ್ ಆರ್ಡಿನರಿ ಪೋಸ್ಟ್ ನಲ್ಲಿ ಶೃಂಗೇರಿಯ ಪೋಸ್ಟ್ ಡಬ್ಬಿಗೆ ಯಾರೋ ಹಾಕಿದ್ರು. ಪೋಸ್ಟ್ ಮ್ಯಾನ್ ಆ ಪೋಸ್ಟ್ ಡಬ್ಬಿಯನ್ನು ಓಪನ್ ಮಾಡಿದಾಗ ಸ್ಟಾಂಪ್ ಇಲ್ಲದ ಪತ್ರ ಸಿಕ್ಕಿತು. ಅದರಲ್ಲಿ ಫ್ರಮ್ ಅಡ್ರೆಸ್ ಇರಲಿಲ್ಲ. ಟು ಅಡ್ರೆಸ್ ಇತ್ತು. ಅದು ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ವರಖೇಡಿಯವರಿಗೆ(ಡಿಲ್ಲಿಗೆ) ಬರೆದ ಪತ್ರವಾಗಿತ್ತು. ಪೋಸ್ಟ್ ಮ್ಯಾನ್ ಸ್ಟಾಂಪ್ ಇಲ್ಲದ ಪತ್ರ ನಮ್ಮ ಕಾಲೆಜಿನದ್ದೇ ಅಂತ ಊಹಿಸಿ ಕಾಲೇಜಿನ ಆಫೀಸಿಗೆ ತಂದು ಕೊಟ್ಟು ಸ್ಟಾಂಪ್ ಹಚ್ಚಿ ಕೊಡಲು ಹೇಳಿದ. ಗುರುರಾಜ ಭಟ್ಟರು “ಕುಲಪತಿಗಳಿಗೆ ಇಂತಹ ಯಾವುದೇ ಪತ್ರ ಆರ್ಡಿನರಿ ಪೋಸ್ಟ್ ನಲ್ಲಿ  ಇಲ್ಲಿಂದ ಕಳುಹಿಸುವುದಿಲ್ಲ” ಎಂದು ಚಕಿತರಾಗಿ ಅದನ್ನು ನನ್ನ(ಡೈರಕ್ಟರ್ ರವರ) ಗಮನಕ್ಕೆ ತಂದಾಗ, ಹಾಗಾದ್ರೆ ಅದರಲ್ಲಿ ಯಾರು ಏನು ಬರೆದಿರಬಹುದು ಎಂದು ಒಂದು ಸಲ ಪರಿಶೀಲಿಸಬೇಕು ಎಂಬುದಾಗಿ ತೆರೆದು ನೋಡಿದಾಗ ಸ್ಪಸ್ಟ ಆಯಿತು – ಇದು ಅದೇ ಮನುಷ್ಯನ ಕಿತಾಪತಿ ಅಂತ. ಅದರಲ್ಲಿ ಹೀಗೆಲ್ಲಾ ಬರೆದಿತ್ತು -  ಬಿಹಾರಿ ಡೈರೆಕ್ಟರ್ ಬಂದಾಗಿನಿಂದ ಇಲ್ಲಿ ಯಾವುದೇ ರೀತಿಯ ವ್ಯವಸ್ಥಿತ ಅಡ್ಮಿನಿಸ್ಟ್ರೇಶನ್ ಇಲ್ಲ. ಎಲ್ಲರೂ ಸಂತೆಯ ತರಹ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರಂತೂ ಬಂದು ಸೈನ್ ಮಾಡಿ ಪೇಟೆ ಕಡೆಗೆ ವೈಯಕ್ತಿಕ ಕೆಲಸಗಳಿಗೆ ಹೋಗುತ್ತಾರೆ. ಒಬ್ಬನಂತೂ ಸೈನ್ ಮಾಡಿದ ತಕ್ಷಣ ಫುರ್ ಅಂತ ಬೈಕ್ ಸ್ಟಾರ್ಟ್ ಮಾಡಿ ಓಡಿ ಹೋಗ್ತಾನೆ. ಇನ್ನೊಬ್ಬ ಆರೋಗ್ಯ ಸರಿಯಿದ್ದರೂ ಮೆಡಿಕಲ್ ಲೀವ್ ಹಾಕಿ ಪೌರೊಹಿತ್ಯ ಮಾಡ್ತಾನೆ. ಕುಲಪತಿಗಳೂ ಸರಿಯಿಲ್ಲ. ಯಾರ್ಯಾರಿಗೋ ಶಿಕ್ಷಾವಿಭೂಷಣ ಎಂಬ ಬಿರುದು ಕೊಡ್ತಾರೆ. ಅದು ವಿಭೂಷಣವೋ ವಿಭೀಷಣವೋ ? ಇಲ್ಲಿ ನ್ಯಾಕ್ ಗಾಗಿ ಎಸ್ಟೆಸ್ಟೋ ಕೆಲಸ ಮಾಡಿದವರಿಗೆ ಏನೂ ಸನ್ಮಾನ ಇಲ್ಲ. ಪುರಸ್ಕಾರವೂ ಇಲ್ಲ ಇತ್ಯಾದಿ ಇತ್ಯಾದಿ.

ಆ ಕಾಗದವನ್ನು ಹಿಂದಿಯಲ್ಲಿ ಬರೆದಿದ್ದರು. ಅದರ ಭಾಷೆಯಿಂದಲೇ ಸ್ಪಷ್ಟವಾಗುವುದು ಏನೆಂದರೆ ಇದನ್ನು ಯಾವನೋ ಒಬ್ಬ ಹಿಂದಿ ಮಾತೃಭಾಷೆಯಲ್ಲದವ ಬರೆದದ್ದು ಎಂದು. ಅದರಲ್ಲಿ ಕೊನೆಗೆ ಶಿಕ್ಷಾವಿಭೂಷಣದ ಬಗ್ಗೆ ಆಕ್ಷೇಪ ಎತ್ತಿದ್ದೇ ಅದನ್ನು ಪಡೆದವರೋ ಅವರ ಒಡನಾಡಿಗಳೋ ಬರೆದಿದ್ದಲ್ಲವೆಂದು ಸಾಬೀತುಪಡಿಸಲು. ಜೊತೆಗೆ ನ್ಯಾಕ್ ಗಾಗಿ ಕೆಲಸ ಮಾಡಿದವರಗಿಗೆ ಶಿಕ್ಷಾವಿಭೂಷಣ ಕೊಡಲಿಲ್ಲ ಎಂದು ಬರೆದಿದ್ದೇ ಅನಂತಪದ್ಮನಾಭರು ಈ ಕಾಗದವನ್ನು ಬರೆದಿದ್ದಾರೆ ಎಂದು ಕುಲಪತಿಗಳು ಊಹಿಸಲಿ ಅಂತ. ಏಕೆಂದರೆ ಹಾಗೆ ಬರೆಯುವುದರಿಂದ ಶಿಕ್ಷಾವಿಭೂಷಣ ಪಡೆದವರಿಗೆ ಯಾವುದೇ ಹಾನಿಯಿಲ್ಲ. ಜೊತೆಗೆ ಕುಲಪತಿಗಳು ಇಂತಹ ಬಿರುದುಗಳನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ಆಕ್ಷೇಪಗಳಿವೆ ಎಂಬುದೂ ಇದರಿಂದ ತಿಳಿಯಲಿ ಅಂತ.

ಸೈನ್ ಮಾಡಿ ಬೈಕ್ ಪುರ್ ಅಂತ ಓಡಿಸಿಕೊಂಡು ಹೋಗುತ್ತಾರೆ ಅಂತ ಬರೆದಿರುವುದು ಹರಿಪ್ರಸಾದ್ ಕುರಿತಾಗಿ. ನಾನು ಈಗ ಒಂದು ದಿವಸ ಪರಿಸರದ ಅಧ್ಯಾಪಕೇತರ ಕರ್ಮಚಾರಿಗಳಿಗೆ ಗೀತಾ ಒಲಂಪಿಯಾಡ್ ನ ಪರೀಕ್ಷೆ ಕಟ್ಟಿಸಿದ್ದರಿಂದ ಅವರಿಗೆ ಪಾಠಮಾಡುವ ವ್ಯವಸ್ಥೆ ಮಾಡಿದ್ದೆ. ಹಾಗಾಗಿ ಅವರ ಅಪೇಕ್ಷೆಯ ಮೇರೆಗೆ ನಾನು ಅವರಿಗೆ ಉಚಿತವಾಗಿ ಗೀತಾ ಪ್ರೆಸ್ ನ ಕನ್ನಡದ ಅರ್ಥ ಸಹಿತವಾದ ಭಗವದ್ಗೀತೆಯ ಪುಸ್ತಕಗಳನ್ನು ಹಂಚ್ಚುತ್ತಿದ್ದೆ. ಐದಾರು ಪ್ರತಿಗಳು ಕಡಿಮೆಯಾಗಿದ್ದರಿಂದ ಯಾವತ್ತು ನಾನು ಸೈನ್ ಮಾಡಿ ಅದನ್ನು ತರಲು ಪೇಟೆಗೆ ೯.೩೦ ಕ್ಕೆ ಹೋಗಿದ್ದೆನೋ ಆವತ್ತೇ ಸುಬ್ರಾಯ ಭಟ್ಟರು ಸೈನ್ ಮಾಡಿ ಪೇಟೆಗೆ ಹೊರಡುತ್ತಿದ್ದ ನನ್ನನ್ನು ನೋಡಿ ಅವತ್ತೇ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್ ಮಾಡಿದ್ದರು. ನಾನು ಆವತ್ತು ಹತ್ತು ಗಂಟೆಗೆ ಪುಸ್ತಕ ಖರೀದಿ ಮಾಡಿ ಬಂದ ಮೇಲೆ ತಿಳಿಯಿತು ಈ ಮನುಷ್ಯ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್ ಮಾಡಿದೆ ಅಂತ. ಹೀಗೇ ಆ ಕಾಗದದಲ್ಲಿಯೂ ಬರೆದಿದ್ದರಿಂದ ಸ್ಪಸ್ಟ ಆಯ್ತು ಏನೆಂದರೆ ಅದನ್ನು ಬರೆದಿದ್ದು ಸುಬ್ರಾಯ ಭಟ್ಟ ಮತ್ತು ಆತನ ಪಟಾಲಮ್ಮೇ ಅಂತ.

ಚಂದ್ರಕಾಂತ ಭಟ್ಟರು ಹೆಚ್. ಪಿ. ಎಲ್. ತೆಗೆದುಕೊಂಡಿದ್ದರು. ಆದರೆ ಆಫೀಸಿನ ಮಂಜುಳಾ  ಎಮ್.ಎಲ್.(ಮೆಡಿಕಲ್ ಲೀವ್) ಅಂತ ಅಟೆಂಡೆಂನ್ಸ್ ಬುಕ್ ನಲ್ಲಿ ಬರೆದಿದ್ದಳು.  ಅದು ಯಾರದ್ದೋ ಸೂಚನೆಯ ಮೇರೆಗೆ ಬರೆದಂತೆ ಅನಿಸುತ್ತದೆ. ಯಾಕೆಂದರೆ ಯಾವತ್ತೂ ಅಟೆಂಡೆಂನ್ಸ್ ಬುಕ್ ನಲ್ಲಿ ಎಮ್.ಎಲ್.(ಮೆಡಿಕಲ್ ಲೀವ್) ಅಂತ ಬರೆಯುವ ಪದ್ಧತಿ ಇಲ್ಲ. ಹಾಗಾದರೆ ಅವಳ ಕೈಯಲ್ಲಿ ಆ ರೀತಿ  ಬರೆಯಲು ಪ್ರೇರೇಪಿಸಿದವರು  ಸುಬ್ರಾಯಭಟ್ಟರ ಪಟಾಲಮ್ಮಿನವರೇ ಎಂಬುದು ಸ್ಪಸ್ಟ.

ದೇವರು ನಿಜವಾಗಲೂ ಇದ್ದಾನೆ ರೀ. ಇಲ್ಲದಿದ್ದರೆ ಖದೀಮರ ಸಂಚು ಹೇಗೆ ಬಯಲಾಗುತ್ತೆ.

Sunday, May 5, 2024

ನಮ್ಮ ಶಾಲೆ

 

ನಮ್ಮ ಶಾಲೆ

ಮೇಲ್ಮಠದ ಎದುರಿನ ಅಂಗಳದ ಉತ್ತರದಲ್ಲಿ ಎತ್ತರದಲ್ಲಿ ಒಂದು ಸಣ್ಣ ಶಾಲೆ ಇತ್ತು. ಅದರಲ್ಲಿ ೨೦/೩೦ ಅಡಿ ಉದ್ದದ ಒಂದೇ ಕೊಠಡಿ ಇದ್ದದ್ದು. ಇನ್ನೊಂದು ಕಡಿಮಾಡಿನಡಿಯಲ್ಲಿ ಸಣ್ಣ ಕೊಠಡಿಯಿತ್ತು. ಅದನ್ನು ಯಾರಾದರೂ ಹೊರಗಿನ/ಪರವೂರಿನ ಉಪಾಧ್ಯಾಯರು ಬಳಸುತ್ತಿದ್ದರು.

ನಾನು ಶಾಲೆಗೆ ೫ನೇ ವರ್ಷಕ್ಕೆ ಹೋಗಲು ಆರಂಭಿಸಿದ್ದೆ. ನನ್ನ ಅಣ್ಣಂದಿರಿಬ್ಬರು ಅಕ್ಕಂದಿರಿಬ್ಬರು ಆಗ ಆ ಶಾಲೆಗೆ ಹೋಗುತ್ತಿದ್ದರು. ನಾನಿನ್ನೂ ಒಂದನೇ ತರಗತಿಗೆ ಸೇರಿರಲಿಲ್ಲ. ಶಾಲೆಯ ಒಬ್ಬರೇ ಒಬ್ಬರು ಮಾಸ್ಟರ್ ಆದ ವೃದ್ಧ ವೆಂಕಪ್ಪ ಹೆಬ್ಬಾರ್ ರವರು ನನಗೆ ಸ್ಲೇಟ್ನಲ್ಲಿ ಅ ಆ ಇ ಈ ಎಂಬ ಅಕ್ಷರಗಳನ್ನು ದೊಡ್ಡದಾಗಿ ಬರೆದು ಕೊಡುತ್ತಿದ್ದರು. ನಾನು ಅದನ್ನು ಹೊರಗಿನ ಜಗಲಿಯಲ್ಲಿ ಕುಳಿತು ಮತ್ತೆ ಮತ್ತೆ ತಿದ್ದಿ ಬರೆಯಬೇಕಿತ್ತು. ಹಾಗೆ ತಿದ್ದಿ ತಿದ್ದಿ ಮದ್ಯಾಹ್ನ ಆಗುವಾಗ ಗೋಣಿ ದಾರದಷ್ಟು ದಪ್ಪಗಾದ ನಾಲ್ಕು ಅಕ್ಷರಗಳು ತಯಾರಾಗುತ್ತಿದ್ದವು.

ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ನಮಗೆ ೫ ಮಂದಿ ಅಣ್ಣ ತಮ್ಮಂದಿರಿಗೆ ಅಕ್ಕತಂಗಿಯರಿಗೆ ಕೊಡೆ ಎಲ್ಲಿಂದ ತರಬೇಕು. ಆಗ ಪ್ರಾಯಶಃ ನಮ್ಮೂರಲ್ಲಿ ಮನೆಗೊಂದು ಕೊಡೆ ಇರ್ತಿತ್ತೋ ಇಲ್ವೋ ? ಜಾರ್ನಬೇಟ್ಟಿನ ಅಜ್ಜಿ ಲಕ್ಷ್ಮ್ಯಕ್ಕ ಯಾವಗಲೂ ಮರಸಣಿಗೆಯ ದೊಡ್ಡ ಎಲೆಯನ್ನು (ದಂಟು ಸಮೇತ ಕತ್ತರಿಸಿ)  ಹಿಡಿದುಕೊಂಡೇ ಎಲ್ಲಾ ಕಡೆ ಓಡಾಡುತ್ತಿದ್ದರು. ಪ್ಲಾಸ್ಟಿಕ್ ನ ಕೊಪ್ಪೆ ತಯಾರಿಸಿ ಬಹುಶಃ ಹೆಚ್ಚಿನ ಮಕ್ಕಳು ಮಳೆಗಾಲದಲ್ಲಿ ಬಳಸುತ್ತಿದ್ದರು. ನಮಗೂ ಅದೇ ಛತ್ರಿ. ನಾನಂತೂ ಇನ್ನೂ ಸೇಫ್ ಹೇಗಂತೀರಾ ? ಇಬ್ಬರು ಅಕ್ಕಂದಿರು ಒಂದು ಪ್ಲಾಸ್ಟಿಕ್ ನ್ನು ಮುಂದೆ ಒಬ್ಬಳು ಹಿಂದೆ ಒಬ್ಬಳು ಅಂತ ಎಳೆದು ಇಡಿದುಕೊಳ್ಳುತ್ತಿದ್ದರು. ನಾನು ಅವರಿಬ್ಬರ ನಡುವೆ ಸೇಫ್. ಆಗ ಆಳುಗಳೂ ಕೂಡ ಪ್ಲಾಸ್ಟಿಕ್ ನ ಕೊಪ್ಪೆಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಅದರೆ ಕೊಟ್ರಾಕ್ಯಾರ್ ದಾಟಿ ಕೆಳಸುಳಿಗೋಡಿನ(ಹಿತ್ತಲ್ಲದ) ಪಾಚಿ ತುಂಬಿದ ಸಂಕದಲ್ಲಿ(ಪಾಪು) ದಾಟುವುದು ತುಂಬ ಅಪಾಯದ ಕೆಲಸ ಆಗಿತ್ತು.

ನೆಟ್ಟಿಗಾಗುವಾಗ ಬಳಸುತ್ತಿದ್ದ ಕೊರಂಬು ತುಂಬ ಹಿತಕರ ಸಾಧನ ಆಗಿತ್ತು. ಪ್ಲಾಸ್ಟಿಕ್ ನ ಬಳಕೆ  ಆಗ ತೀರ ಕಡಿಮೆ ಇತ್ತು. ಕೊಡೆಗಳೂ ಹೆಚ್ಚಾಗಿ ಮರದ/ಬೆತ್ತದ ಜೆಲ್(ಹಿಡಿ ಮತ್ತು ಮಧ್ಯದ ಸಲಾಕೆ)ನವುಗಳೇ ಆಗಿದ್ದವು. ಅವುಗಳಲ್ಲಿ ಬಳಸು ಬಟ್ಟೆಯೂ ಕಪ್ಪಿನ ಕಾಟನ್(ಹತ್ತಿ)ಬಟ್ಟೆಯೇ ಆಗಿತ್ತು. ಅದು ಮಳೆ ಬಿಟ್ಟ ಮೇಲೆ ಒಣಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ನಂತರ ನಾನು ೫ ನೇ ತರಗತಿಯಲ್ಲಿದ್ದಾಗ ಟೆರಿಕಾಟ್ ಬಟ್ಟೆಯನ್ನು ಬಳಸಿದ ಬಟನ್ ನ ಕೊಡೆಗಳು ಮಾರುಕಟ್ಟೆಗೆ ಬರಲು ಆರಂಭಿಸಿದವು.

ನನಗೆ  ಆರು ವರ್ಷವಾದ ಬಳಿಕ ವೆಂಕಪ್ಪ ಹೆಬ್ಬಾರ್ ರು  ನನಗೆ ಒಂದನೇ ತರಗತಿ ಗೆ ಪ್ರವೇಶ ಕೊಟ್ಟರು. ಆಗ ನನ್ನ ತರಗತಿಯಲ್ಲಿ ಒಟ್ಟು ಎಂಟು ಜನ ಮಾತ್ರ ವಿದ್ಯಾರ್ಥಿಗಳು ಇದ್ದರು.

Saturday, May 4, 2024

ಕಳ್ಳ ಭಟ್ಟಿ ತಯಾರಿ

 

ಕಳ್ಳ ಭಟ್ಟಿ ತಯಾರಿ

          ನಮ್ಮ ಗುಡ್ಡೆಯಲ್ಲಿ ಹೆಚ್ಚಲ್ಲದಿದ್ದರೂ ಸುಮಾರು ಒಂದು ಕ್ವಿಂಟಾಲ್ ಗೇರುಬೀಜವಾಗುವಷ್ಟು ಗೇರುಮರಗಳಿದ್ದವು. ಹಾಗಾಗಿ ಆ ಹಣ್ಣುಗಳನ್ನು ಬಳಸಿಕೊಂಡು ಕಳ್ಳಭಟ್ಟಿ ತಯಾರಿಸುವ ಯೋಜನೆ ಸೂರ್ಯಣ್ಣ ಶೆಟ್ಟರದ್ದಾಗಿತ್ತು. ನಮ್ಮ ಜಮೀನಿನ ಪೂರ್ವದಲ್ಲಿ ಮಿತ್ತಗುಮ್ಮೆಯಲ್ಲಿ ಒಂದು ಕೆರೆ ಇತ್ತು. ಅದರ ಪಕ್ಕದಲ್ಲಿಯೇ ನಾವು ಬೇಸಿಗೆಯಲ್ಲಿ ಯಾವಾಗಲೂ ಕೊಡದಲ್ಲಿ ಅದೇ ಕೆರೆಯಿಂದ ನೀರೆತ್ತಿ ಸ್ನಾನ ಮಾಡುತ್ತಿದ್ದೆವು. ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಲು ಕಷ್ಟ ಅಂತ ಅಲ್ಲಿ ನಮ್ಮ ತಾಮ್ರದ ಹಂಡೆಯನ್ನು ತೆಗೆದುಕೊಂಡು ಹೋಗಿ ಬಟಾಬಯಲಿನಲ್ಲಿ ಒಂದು ಒಲೆ ಮಾಡಿ ಅಲ್ಲೇ ಬಿಸಿನೀರು ಕಾಯಿಸಿ ಸ್ನಾನ ಮಾಡುವ ಪರಿಪಾಠಿ ಮನೆಯ ಎಲ್ಲರದ್ದೂ. ಸೂರ್ಯಣ್ಣ ಶೆಟ್ಟರಿಗೆ ಈ ತಾಮ್ರದ ಹಂಡೆಯ ಮೆಲೆ ಕಣ್ಣು ಬಿತ್ತು. ಕಳ್ಳಭಟ್ಟಿ ತಯಾರಿಗೆ ಅದರ ಆವಶ್ಯಕತೆ ಇತ್ತು.

ಇನ್ನೊಂದು ಹಂಡೆಯನ್ನು ಸೂರ್ಯಣ್ಣ ಶೆಟ್ರು ಖರೀದಿಸಿ ತಂದ್ರು. ಅದರಲ್ಲಿ ಗೇರು ಹಣ್ಣುಗಳನ್ನು ತುಂಬಿಸಿ ಸ್ವಲ್ಪ ನೀರು ಬೆರೆಸಿ ೧೫ ದಿನಗಳ ಕಾಲ ಮುಚ್ಚಿ ಇಡುತ್ತಿದ್ದರು. ಗೇರುಹಣ್ಣು ಅದರಲ್ಲಿ ಕೊಳೆತು ಹುಳಿಯಾಗಿ ಹದವಾದ ಮೇಲೆ ರಾತ್ರಿ ಹೊತ್ತು ಭಟ್ಟಿ ತಯಾರಿಸುವ ಯೋಜನೆ. ಅದಕ್ಕೆ ಶೆಟ್ರಿಗೆ ಒಬ್ಬ ಸಹಾಯಕ ಬೇಕು. ಅವರಿಗೆ ಸುಲಭವಾಗಿ ಅದಕ್ಕೆ ಸಿಕ್ಕಿದ್ದು ಮತ್ತಾವಿನ ಹಬುರ ಗೌಡ. ಹಬುರ ಗೌಡ ನಮ್ಮ ಮನೆಗೆ ಯಾವಾಗಲೂ ಅಡಿಕೆ ಕೊಯ್ಲಿಗೆ, ತೆಂಗಿನಕಾಯಿ ಕೊಯ್ಲಿಗೆ, ಮಳೆಗಾಲದಲ್ಲಿ ಔಷಧಿ ಸಿಂಪರಣೆಗೆ ಬರ್ತಾ ಇದ್ದ. ತುಂಬ ಒಳ್ಳೆಯ ಮನುಷ್ಯ. ಭಟ್ಟಿ ತಯಾರಿಸಲಿಕ್ಕೆ ಶುರು ಮಾಡುವುದೇ ಆ ದಿನದ ಹಗಲಿನ ಕೆಲಸ (ನಮ್ಮ ಮನೇದು) ಮುಗಿದ ಮೇಲೆ. ಕೆಲಸ ಮುಗಿಯುವುದು ೬.೦೦ ಗಂಟೆಗೆ. ಆ ನಂತರ ಶೆಟ್ರು ೧೫ ದಿನದ ಹಿಂದೆ ಗೌಪ್ಯವಾಗಿ ತುಂಬಿಸಿ ಇಟ್ಟ ಹಂಡೆಯಿಂದ ಬಕೆಟಿನಲ್ಲಿ ಕೊಳೆತ ಗೇರುಹಣ್ಣನ್ನು ತಂದು ನಮ್ಮ ಸ್ನಾನದ ಹಂಡೆಗೆ ತುಂಬಿಸುತ್ತಿದ್ದ.  ಸುಮಾರು ಮುಕ್ಕಾಲು ಭಾಗದಷ್ಟು ಕೊಳೆತ ಗೆರು ಹಣ್ಣು ತುಂಬಿದ ಮೇಲೆ ಅದರ ಒಳಗೆ ಮುಳುಗದಂತೆ ಒಂದು ಬೋಗುಣಿಯನ್ನು (ಸುಮಾರು ೫ ಲೀ ನೀರು ತುಂಬುವಷ್ಟು ದೊಡ್ಡದು) ಹಗ್ಗದ ಸಹಾಯದಿಂದ ನೇತು ಹಾಕುತ್ತಾರೆ. ನಂತರ ಹಂಡೆಯ ಬಾಯಿಗೆ ತಾಮ್ರದ ಕಡುಬಿನ ಅಟ್ಟದ ಮುಚ್ಚಳವನ್ನು ಅಂಗಾತವಾಗಿ ಮುಚ್ಚಿ ಇಡುತ್ತಾರೆ. ಕಡುಬಿನ ಅಟ್ಟದ ಮುಚ್ಚಳ ಮತ್ತು ಹಂಡೆಯ ಬಾಯಿಯ ನಡುವಿನ ಗ್ಯಾಪ್ ನ್ನು ಅಂಟು ಮಣ್ಣು ಲೇಪಿಸಿ ಮುಚ್ಚುತ್ತಾರೆ. ನಂತರ ಅಂಗಾತ ಮುಚ್ಚಿದ ಕಡುಬಿನ ಅಟ್ಟದ ಮುಚ್ಚಳದ ಒಳಗೆ ನೀರನ್ನು ಸುರಿಯಲಾಗುತ್ತದೆ. ಸುಮಾರು ೨/೩ ಗಂಟೆಗಳ ಕಾಲ ಬಲವಾದ ಬೆಂಕಿಯಲ್ಲಿ ಕೊಳೆತ ಗೇರುಹಣ್ಣನ್ನು ಕುದಿಸಲಾಗುತ್ತದೆ. ಆ ವಧಿಯಲ್ಲಿ ಸುಮಾರು ೧೦/೧೨ ಬಾರು ಮುಚ್ಚಳದ ಮೇಲಿನ ಬಿಸಿಯಾದ ನೀರನ್ನು ತೆಗೆದು ತಣ್ಣೀರನ್ನು ಸುರಿಯಲಾಗುತ್ತದೆ. ಆಗ ಹಂಡೆಯ ಒಳಗೆ ನೆತು ಬಿಟ್ಟ ಸ್ಟೀಲಿನ ಬೋಗುಣಿಯಲ್ಲಿ ಬಾಷ್ಪೀಕರಿಸಿದ ಕೊಳೆತ ಗೇರುಹಣ್ಣಿ ನ ರಸ ಶೇಖರಣೆಯಾಗುತ್ತದೆ. ಅದರ ಪರಿಮಾಣ ಸುಮಾರು ೫ ಲೀ. ಸುಮಾರು ರಾತ್ರಿ ಹತ್ತು ಗಂಟೆಗೆ ಈ ಕೆಲಸ ಮುಗಿಯುತ್ತದೆ.

ಹಬುರನಿಗೆ ಅದರಲ್ಲಿ ಪ್ರಾಯಶಃ  ಎರಡು ಬಾರಿ ೯೦ ಕುಡಿಯುವ ಅವಕಾಶ. ಅವನಿಗೆ ಅದೇ ಸಂಬಳ. ಅದೇ ಇನಾಮು. ಉಳಿದ ಕಳ್ಳಭಟ್ಟಿಯನ್ನು ಬೇರೆ ಬೇರೆ ಬಾಟಲಿಗಳಿಗೆ ತುಂಬಿಸಿ ನಮ್ಮ ಅಡಿಕೆ ತೋಟದಲ್ಲಿ ಅಲ್ಲಲ್ಲಿ ಅಡಿಕೆ ಬುಡದಲ್ಲಿ ಶೆಟ್ರು  ಹುಗಿಸಿಟ್ಟಿರುತ್ತಾರೆ. ಯಾರದರೂ ಆಗಾಗ ಹಗಲಿನಲ್ಲಿ ಅವರನ್ನು ಕೇಳಿಕೊಂಡು ಬರುವ ಗಿರಾಕಿಗಳಿಗೆ ಶ್ಟ್ರು ಅದನ್ನು ಮಾರುತ್ತಾರೆ. ಹೇಗಿದೆ ಶೆಟ್ರ ಭಟ್ಟಿ?

Friday, May 3, 2024

ಸೂರ್ಯಣ್ಣ ಶೆಟ್ಟ್ರು.

 

ಸೂರ್ಯಣ್ಣ ಶೆಟ್ಟ್ರು.

         ನಮ್ಮ ತಂದೆಯವರು ತೀರಿ ಎರಡು ವರ್ಷದ ಬಳಿಕ ನಮ್ಮ ಮನೆಗೆ ಸೂರ್ಯಣ್ಣ ಶೆಟ್ಟರ ಆಗಮನವಾಯಿತು. ಆಗಲೇ ಶೆಟ್ರಿಗೆ ಅರವತ್ತು ವರ್ಷ ಕಳೆದಿತ್ತು. ಅವರಿಗೆ ದಿನಕ್ಕೆ ೮ ರೂಪಾಯಿ ಸಂಬಳ. ಅವರು ಚಲ್ಲ ಪೂಜಾರಿಯ ಮನೆಯಲ್ಲಿ ಪ್ರಾಯಶಃ ರಾತ್ರಿ ಉಳಿದುಕೊಳ್ಳುತ್ತಿದ್ದರು. ಚಲ್ಲ ಪೂಜಾರಿಯ ವಿಧವೆ ಮಗಳಾದ ಸಂಕ್ರಿಯ ಮೇಲೆ ಅವರಿಗೆ ಏನೋ ಅನುರಾಗ ಅಂತ ಅನಿಸುತ್ತದೆ.

          ನಮ್ಮ ಮನೆಯಲ್ಲಿ ಬೆಳಿಗ್ಗೆ ೮.೩೦ ಕ್ಕೆ ಬಂದು ಎರಡು ಮೂರು ಹೊರೆ ಸೊಪ್ಪು/ದರಲೆ ಮಾಡಿ, ೨/೩ ಹೊರೆ ಹಸಿರು ಹುಲ್ಲು ಮಾಡಿ, ತೋಟದ ಕೆಲಸ ಮಾಡಿ ದನಗಳಿಗೆ ಕೋಣಗಳಿಗೆ ಕಲಕಚ್ಚು ಕೊಟ್ಟು ಆರೈಕೆ ಮಾಡಿ ಸಂಜೆ ಸ್ನಾನ ಮಾಡಿ ಊಟ ಮಾಡಿ ೬ ಗಂಟೆಗೆ ಹೋಗುತ್ತಿದ್ದರು.

ವಿಶೇಷವಾಗಿ ಸೂರ್ಯಣ್ಣ ಶೆಟ್ರಿಗೆ ಪ್ರಿಯವಾದ ಕೆಲಸ ಅಂದರೆ ಹೂಟೆ ಮಾಡುವುದು. ಅವರು ಗದ್ದೆಯಲ್ಲಿ ಹೂಟೆ ಮಾಡಲಿಕ್ಕೆ ಕೊಣಗಳನ್ನು ಕರಕೊಂಡು ಹೋಗುವಾಗ ನಾನೂ ಕೂಡ ಹೋಗುತ್ತಿದ್ದೆ. ಅವರು ಕೋಣಗಳೆರಡಕ್ಕೆ ನೊಗ ಕಟ್ಟಿ ನೇಗಿಲನ್ನು(ನಾವೇರಿ) ಕಟ್ಟಬೇಕಿದ್ದರೆ ಇನ್ನೊಂದು ತುದಿಯಲ್ಲಿ ನೇಗಿಲ ಹಿಡಿಯನ್ನು ಹಿಡಿದುಕೊಳ್ಳಲು ಯಾರಾದರೂ ಬೇಕಾಗುತ್ತದೆ. ನಾನು ಅದಕ್ಕೆ ಆಗ ಉಪಲಭ್ಯನಿರುತ್ತಿದ್ದ ಹುಡುಗ. ಆಮೇಲೆ ಶೆಟ್ರಿಗೆ ಹತ್ತು ಗಂಟೆಗೆ ಚಾ ತಿಂಡಿ(ದೋಸೆ/ಕಡುಬು) ತೆಗೆದು ಕೊಂಡು ಹೋಗುವುದೂ ನಾನೇ. ಚಾ ಒಂದು ಲೋಟದಷ್ಟು ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಒಂದು ಸಣ್ಣ ಸ್ಟೀಲಿನ ಚೊಂಬು ಮನೆಯಲ್ಲಿ ಇತ್ತು.  ಆ ಚೊಂಬಿನಲ್ಲಿ ಮುಕ್ಕಲುಭಾಗ ಚಾ ಅವರಿಗೆ ಬೇಕಾಗ್ತಿತ್ತು. ಆಮೇಲೆ ಮಧ್ಯಾಹ್ನ ಹೂಟೆ ಮುಗಿದ ಮೇಲೆ ಕೋಣಗಳನ್ನು ಸ್ನಾನ ಮಾಡಿಸಲು ಪೊಸಮಠದ ಹೊಳೇಗೆ(ಗುಂಡಿಗೆ) ಕರೆದುಕೊಂಡು ಹೋಗುತ್ತಿದ್ದರು. ಆಗಲೂ ನಾನು ಹೋಗುತ್ತಿದ್ದೆ. ಜೊತೆಗೆ ಕರುಣನೂ ಇರುತ್ತಿದ್ದ. ಮಳೆಗಾಲದ ಆರಂಭ(ಕಾರ್ತಿ ತಿಂಗಳು) ಆಗಿದ್ದರಿಂದ ಮಳೆ ಬಂದು ಹೊಳೆಯಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಕೋಣಗಳು  ಸಂತೋಷದಿಂದ ಗೊಂಡಿಯಲ್ಲಿ ಈಜಾಡುತ್ತಿದ್ದಾಗ ನಾವೂ ಕೂಡ ಅದರಲ್ಲಿ ಅವುಗಳ ಜೊತೆಗೆ ಮುಳುಗೇಳುತ್ತಿದ್ದೆವು. ಅವುಗಳ ಬೆನ್ನು ಹೆಚ್ಚಾಗಿ ಮುಳುಗುತ್ತಿರಲಿಲ್ಲ ಹಾಗಾಗಿ ಬೆನ್ನಲ್ಲಿದ್ದ ಕೆಸರನ್ನು ಶೆಟ್ರು ತೊಳೆಯುತ್ತಿದ್ದರು. ಆ ಬಳಿಕ ಅವುಗಳನ್ನು ಮೇಯಲಿಕ್ಕೆ ಅಲ್ಲೇ ಬೈಲಿನ ಅಂಚಿಗೆ ಶೆಟ್ರು ಬಿಡುತ್ತಿದ್ದರು. ನಾವು ಮಧ್ಯಾಹ್ನ ಊಟ ಮುಗಿಸಿ ಅವುಗಳು ಮೇಯುತ್ತಿರುವಾಗ ಅವುಗಳ ಬೆನ್ನೇರಿ ಕುಳಿತುಕೊಳ್ಳುತ್ತಿದ್ದೆವು. ನಾನು ಕಾಳನ ಮೇಲೆ ಕುಳಿತರೆ ಕರುಣ ಬೆಳ್ಳನ ಮೇಲೆ ಕುಳಿತುಕೊಳ್ಳುತ್ತಿದ್ದ. ಆದರೆ ಅವು ಪಾಪದ ಕೋಣಗಳು. ಮೇಯುವಾಗ ಅವುಗಳಿಗೆ ನಾವು ಕುಳಿತಿರುವುದು ಕಿರಿಕಿರಿಯಾದರೂ ಸಹಿಸಿಕೊಳ್ಳುತ್ತಿದ್ದವು. ಆದರೆ ಅಮ್ಮನಿಗೆ ಗೊತ್ತಾದರೆ ಅಮ್ಮ “ಕೋಣನ ಮೇಲೆ ಕುಳಿತುಕೊಂಡ್ರೆ ಆನೆಯ ಮೇಲೆ ಮೇಲೆ ಕುಳಿತುಕೊಳ್ಳುವ ಯೋಗ ನಶಿಸುತ್ತದೆ” ಅಂತ ಬೈಯುತ್ತಿದ್ದಳು. ಆದರೆ ನಮಗೆ ಆನೆ ಎಲ್ಲಿ ಯಾವಾಗ ಸಿಗುತ್ತದೆ ? ಆ ಯೋಗ ಅಂದರೆ ಆನೆ ಸಿಕ್ಕಿದ ಮಾತ್ರಕ್ಕೆ ಕುಳಿತುಕೊಳ್ಳುವಂತಹುದಲ್ಲ. ಅದಕ್ಕೆ ಅಂಥ ಸಾಧನೆ ಮಾಡಿ ಗೌರವವನ್ನು ಸಂಪಾದಿಸಿರಬೇಕು. ಆಗ ಮಾತ್ರ ಕುಳಿತುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಮಾವುತ ಕೂತ ಹಾಗಾಗುತ್ತದೆ. ಮೈಸೂರು ಮಹಾರಾಜರು ಕುಳಿತ ಹಾಗಾಗುವುದಿಲ್ಲ. ಅದು ತುಂಬ ದೂರದ ಮಾತು. ಹಾಗಾಗಿ ನಾವು ಹತ್ತಿರದಲ್ಲೆ ಇದ್ದ ಕೋಣನ ಮೇಲೆ ಕೂರುವುದರಲ್ಲೇ ಸಂತೋಷ ಪಡುತ್ತಿದ್ದೆವು. ಪ್ರಾಯಶಃ ಹೆಚ್ಚಿನ ಮನುಷ್ಯರ ಪ್ರವೃತ್ತಿಯೇ ಹೀಗೆ. ದೊಡ್ಡದಾದದ್ದನ್ನು ಪಡೆಯುವ ಉದ್ದೇಶವೇ ಇಲ್ಲ, ಹಂಬಲವೂ ಇಲ್ಲ, ಪ್ರವೃತ್ತಿಯಾಗಲೀ, ಪ್ರಯತ್ನವಾಗಲೀ ಇಲ್ಲವೇ ಇಲ್ಲ. ಆದರೆ ಅಮ್ಮ ನಿರಕ್ಷರಳಾದರೂ ದೊಡ್ಡದಾದ ಲಕ್ಷ್ಯವನ್ನು ತೋರಿಸುವ ಕೆಲಸ ಮಾಡಿದ್ದಾಳೆ. ನಾವು ದಡ್ರು ಅಷ್ಟೇ.

Saturday, March 30, 2024

ಕಬ್ಬಿನಾಲೆಯ ನಮ್ಮ ಜಮೀನಿನಲ್ಲಿ ಗದ್ದೆ ಬೇಸಾಯ

ನಾನು ಸಣ್ಣವನಿದ್ದಾಗ ನಮ್ಮ ಜಮೀನಿನ ಭಾಗಗಳಾದ ದೈಕ್ ದ ಬೈಲ್, ಪೊಸಮಠ, ಬೈಲ್, ಅರುವಾರ ಗಳಲ್ಲಿ ಗದ್ದೆ ಬೇಸಾಯ ಮಾಡುತ್ತಿದ್ದರು. ಆಗ ಅಷ್ಟೂ ಗದ್ದೆಗಳಿಂದ ಭತ್ತದ ಹುಲ್ಲಿನ ಹೊರೆ  ನಮ್ಮ ಮನೆಯ ಮೇಲಿನ ಅಂಗಳದಲ್ಲಿ ರಾಶಿ ಹಾಕುತ್ತಿದ್ದರು. ರಾತ್ರಿಯ ಹೊತ್ತಿಗೆ ೭ ಗಂಟೆಯ ನಂತರ  ಗುಳೇಲಿನ ಶಶಿ, ಮಂಜು, ಮೇಲ್ಮನೆಯ ಪೊಮ್ಮಣ್ಣ, ಕೆಳಮನೆಯ ಬಾಲು, ಕುಮಾರ, ಬಾಯರಬೆಟ್ಟಿನ ಸೀತಾರಾಮ, ಮತ್ತಾವಿನ ಹಬುರ ಗೌಡ, ಬೈಲಿನ ನಾರಾಯಣ ಗೌಡ, ಕುರುಂಬಿಲು ನ ಮಕ್ಕಳಾದ ಗೋವಿಂದ,ರಾಮ, ಅಲಂಗಾಡಿನ ಸಿದ್ದು ಗೌಡನ ಮಗ ರಾಜು, ದರ್ಕಾಸಿನ ವಾಸು ಗೌಡ  ಮುಂತಾದವರು ಹುಲ್ಲು ಜಪ್ಪಲಿಕ್ಕೆ ಬರುತ್ತಿದ್ದರು. ಕುರುಂಬಿಲು ನ ಮಕ್ಕಳಾದ ಸುಶೀಲ, ರತ್ನ, ಮಜ್ಜಿಗುಡ್ಡೆಯ ಪದ್ದು, ಸುಶೀಲ, ಹಬುರ ಗೌಡನ ಹೆಂಡತಿ ಕಮಲು, ಅಲಂಗಾಡಿನ ಹಂಕರ ಗೌಡನ ಹೆಂಡತಿ, ಬೈಲ್ ನ್ ಅವಾಸುಗೌಡನ ಹೆಂಡತಿ ಯಮುನ, ಮತ್ತಾವಿನ ಹುಕ್ರ ಗೌಡನ ಹೆಂಡತಿ ಬುಕ್ಕಿ, ಶೀನ ಗೌಡನ ಮಗಳಾದ ಶಂಕರಿ, ದೋಣಿಮಾರಿನ ಅಪ್ಪಿ ಮುಂತಾದವರು ಕೊಯ್ಲಿಗೆ ಬರುತ್ತಿದ್ದರು.  ಬಂಡರಬೆಟ್ಟಿನಲ್ಲಿದ್ದ ಕುರುಂಬಿಲು ಮತ್ತವಳ ಕುಟುಂಬಕ್ಕೆ ಒಂದು ಒಕ್ಕಲು ಬೇಕು ಅಂತ ನಮ್ಮ ಮತ್ತು ಜಾರ್ನಬೆಟ್ಟಿನ ಜಮೀನಿನ ಮಧ್ಯೆ(ಪುಳಿಕ್-ದ ಬೆಟ್ಟು) ಹೊಸದಾಗಿ ನಾನು ಶಾಲೆಗೆ ಸೇರುವ ಮುಂಚೆಯೇ ಮನೆ ಕಟ್ಟಿಸಿ ಕೊಟ್ಟಿದ್ದೆವು.  ನಾನು ಆ ಮನೆಯ ಗೃಹಪ್ರವೇಶಕ್ಕೆ ಹೋದ ನೆನಪು ಈಗಲೂ ಇದೆ. ಸಂಜೆಯ ಹೊತ್ತಿಗೆ ಗೃಹಪ್ರವೇಶಕ್ಕೆ ನಮಗೆ ಕೇಸರಿಬಾತ್ ಮಾಡಿ ಬಡಿಸಿದ್ದನ್ನು ಖುಶಿಯಿಂದ ತಿಂದಿದ್ದೆ.

ಹುಲ್ಲು ಜಪ್ಪಿದ ಮೇಲೆ ನಾಲ್ಕೈದು ಮೊಟ್ಟೆ (ಕುತ್ರಿ ಅಂತ ಮಲ್ನಾಡಿನಲ್ಲಿ ಹೇಳ್ತಾರೆ) ಮಾಡುತ್ತಿದ್ದರು. ಆ ಹುಲ್ಲಿನ ಮೊಟ್ಟೆಗಳ ಸುತ್ತ ಸೆಗಣಿ ಸಾರಿಸುತ್ತಿದ್ದರು. ಬೇಸಿಗೆಯಲ್ಲಿ ನಮಗೆ ಅತ್ಯಂತ ಆನಂದದ  ಜಾಗ ಅಂದರೆ ಹುಲ್ಲಿನ ಮೊಟ್ಟೆಗಳು. ನಾವು ಅದರ ಸುತ್ತಲೂ ಸುತ್ತು ಬರುತ್ತ ಬೇರೆ ಬೇರೆ ರೀತಿಯ ಆಟ ಆಡುತ್ತಿದ್ದೆವು. ಅಲ್ಲೆ ಪಕ್ಕದಲ್ಲಿದ್ದ ಮಾವಿನ ಮರದ ಬೆಳೆದ ಮಾವುಗಳನ್ನು ಕೊಯ್ದು ಮೊಟ್ಟೆಯ ಹುಲ್ಲುಸೂಡಿಗಗಳ(ಹುಲ್ಲಿನಕಟ್ಟು) ಮಧ್ಯೆ ಹುಗಿದಿಡುತ್ತಿದ್ದೆವು. ಆನಂತರ ಒಂದೆರಡು ದಿನಗಳಲ್ಲಿ ಅವು ಹಣ್ಣಾದ ಮೇಲೆ ತಿನ್ನುತ್ತಿದ್ದೆವು.

ಆದರೆ ಈ ಆನಂದ ಬಹಳ ವರ್ಷ ಇರಲಿಲ್ಲ. ನಮ್ಮ ಅಣ್ಣಂದಿರು  ದೈಕ್ ದ ಬೈಲು ಮತ್ತು ಅರುವಾರದ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಮಾರ್ಪಡಿಸಲು ನಿರ್ಣಯಿಸಿದ್ದರು. ಅರುವಾರದಿಂದ ಹೊರೆ ತರುವುದು ತುಂಬ ಕಷ್ಟ. ಗುಡ್ಡ ಇಳಿದು ಹೋಗಿ ಮತ್ತೆ ಹತ್ತಿ ಬರುವಾಗ ಸುಸ್ತಾಗಿರುತ್ತದೆ. ಅರುವಾರ ಶಿವರಾಮಡಿಯ ಹತ್ತಿರ ಇದೆ. ಪ್ರಾಯಶಃ ಅದಕ್ಕೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ಅಡಿಕೆ ಸಸಿ ನೆಟ್ಟಿದ್ದರು.

ಆ ನಂತರ ಪೊಸಮಠದ ಗದ್ದೆಗೆ ನಾನು ಒಂಭತ್ತನೆ ತರಗತಿಯಲ್ಲಿದ್ದಾಗ ಅಡಿಕೆ ಸಸಿ ನೆಟ್ಟರು. ಉಳಿದದ್ದು  ಬಾಕ್ಯಾರು ಮತ್ತು ಬೈಲು ಮಾತ್ರ.  ಬೈಲಿನಲ್ಲಿ ನಾನು ೨೦೦೮ರಲ್ಲಿ ಮದುವೆ ಯಾದ ಬಳಿಕವೂ ಪುಟ್ಟು ಗದ್ದೆ ಬೇಸಾಯ ಮಾಡುತ್ತಿದ್ದ ಆದಾಯ ಇಲ್ಲದಿದ್ದರೂ ಮಾಡದೇ ಇದರ್ಬಾರದು ಎಂಬ ಆದರ್ಶದ ಬೆನ್ನೇರಿ.  

ನಾನು ಸಣ್ಣವನಿದ್ದಾಗ ಅಂದರೆ ಸುಮಾರು ೪೦ ವರ್ಷಗಳ ಹಿಂದೆ ಒಂದು ಬಾರಿ ರಾಧಣ್ಣನ ಮನೆಯ ಮೇಲಿರುವ ( ೫೭ ವರ್ಷಗಳ ಹಿಂದೆ ಸುಟ್ಟು ಹೋದ ನಮ್ಮ ಮನೆಯ ಪಕ್ಕದಲ್ಲಿದ್ದ) ಬೆಟ್ಟ್ ಗದ್ದೆಯನ್ನು ಸ್ವತಃ ರಾಧಣ್ಣನೇ ಹೂಟೆ ಮಾಡಿದ್ದನ್ನು ನೋಡಿದ ನೆನಪಿದೆ. ಆದರೆ ಅದರಲ್ಲಿ ಆವಾಗ ಚೆನ್ನಾಗಿ ಬೆಳೆ ಬಂದಿರಲಿಲ್ಲ. ಆ ನಂತರ ಅಲ್ಲಿ ಯಾವತ್ತೂ ಗದ್ದೆ ಬೇಸಾಯ ಮಾಡಿದ ದಾಖಲೆಯಿಲ್ಲ.

ಕುರುಂಬಿಲು ಇಡೀ ದಿನ ನಮ್ಮ ಅಡತಬೆಟ್ಟುದ(ನ) ತೋಟದ ಅಡಿಕೆ ಹೆಕ್ಕಿಕೊಂಡು ಎಲೆಅಡಿಕೆ ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಅವಳ ಮಕ್ಕಳಾದ ರತ್ನ ಮತ್ತು ಸುಶೀಲ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು. ಅವರಿಗೆ ಆಗ ದಿನಕ್ಕೆ ೨ ರೂಪಾಯಿ ಸಂಬಳ ಇತ್ತು. ಜೊತೆಗೆ ಒಂದು ಸೇರು ಅಕ್ಕಿ. ನಾನೇ ಸ್ವತಃ ಬಹಳ ಬಾರಿ ಅವರಿಗೆ ಕುಚ್ಚಿಲು ಅಕ್ಕಿಯನ್ನು ಸೇರಿನಲ್ಲಿ ಅಳೆದು ಕೊಟ್ಟಿದ್ದು ನೆನಪಿದೆ. ಆದರೆ ದೂರದ ಮತ್ತಾವು ಮೊಟಾದ ಕಡೆಯಿಂದ ಬಂದವರಿಗೆ ಮನೆಯಲ್ಲಿ ಮಧ್ಯಾಹ್ನದ ಊಟ ಮಡಿಸುತ್ತಿದ್ದುದರಿಂದ ಅವರಿಗೆ ೨ ರೂಪಾಯಿ ಸಂಬಳದೊಂದಿಗೆ ಕೇವಲ ೩ ಸಿದ್ದೆ ಅಕ್ಕಿ ಕೊಡುವ ಪದ್ಧತಿ ಇತ್ತು.  ಪ್ರಾಯಶಃ ಆಗ ನಾನು ೨ ನೇ ತರಗತಿಯಲ್ಲಿದ್ದೆ. ಯಾಕೆಂದರೆ ಕುರುಂಬಿಲುವಿನ ಕೊನೆಯ ಮಗಳು ಅದರ ಹಿಂದಿನ ವರ್ಷ ಒಂದನೆ ತರಗತಿಯಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದಳು. ನಂತರ ಅವಳು ಶಾಲೆಗೆ ಬರಲಿಲ್ಲ. ಪ್ರಾಯಶಃ ಆ ನಂತರ ಸುಮಾರು ಹತ್ತು ವರ್ಷ ಕುರುಂಬಿಲುವಿನ ಕುಟುಂಬ ಅಲ್ಲಿ ಇತ್ತು. ಆಮೇಲೆ ಯಾಕೊ ಏನೊ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅವರು ಮನೆ ಬಿಟ್ಟು ಮುದ್ರಾಡಿಗೆ ಹೊಗಿ ಸೆಟ್ಲ್ ಆದರು.

ಈಗ ನಾನು ಇತ್ತೀಚಿಗೆ ಅಂದರೆ ಕಳೆದ ವರ್ಷ(೨೦೨೩ ಜನವರಿ) ಮೇಲ್ಮಠ ದೇವಸ್ಥಾನ ಆವರಣದ ಕೊಡಮಣಿತ್ತಾಯ ಪರಿವಾರ ದೈವಗಳ ವಾರ್ಷಿಕ ನೇಮೊತ್ಸವಕ್ಕೆ(ಕೋಲ) ಹೋದಾಗ  ಸುಮಾರು ೩೦ ವರ್ಷಗಳ ನಂತರ ಕುರುಂಬಿಲುವಿನ ಮಗ ರಾಮನನ್ನು ನೋಡಿದೆ. ಅವನಿಗೆ(ಅವನ ಕುಟುಂಬಕ್ಕೆ) ನಮ್ಮೂರ ಜಾತ್ರೆಯಲ್ಲಿ ದೀವಟಿಗೆ ಹಿಡಿಯುವ ಜವಾಬ್ದಾರಿ ಇದೆ.  ಜಾತ್ರೆ ಗೆ ಅವನು ಯಾವಾಗಲೂ ದೀವಟಿಗೆ ಹಿಡಿಯಲು ಬರ್ತಾನೆ. ಆದರೆ ನಾನು ಜಾತ್ರೆಗೆ ಹೋಗದೆ ಬಹಳ ವರ್ಷಗಳೇ ಕಳೆದಿದ್ದವು. ಹಾಗಾಗಿ ಅವನನ್ನು ಮಧ್ಯಂತರದಲ್ಲಿ ನೋಡುವ ಅವಕಾಶ ಆಗಿರಲಿಲ್ಲ.


Saturday, March 23, 2024

ನನ್ನ ಅಪ್ಪ

 

ನನ್ನ ಅಪ್ಪ

ನನ್ನ ಜೀವನದಲ್ಲಿ ನನಗೆ ಅಪ್ಪನ ಸಾಂಗತ್ಯ ಕೇವಲ ಏಳು ವರುಷ. ಆದರೆ ಜೀವನಪೂರ್ತಿ ನೆನಪಿಸಿಕೊಳ್ಳುವಷ್ಟು ಆದರ್ಶಮೂರ್ತಿ ಆಗಿದ್ದರು. ಭೌತಿಕವಾಗಿ ಸಮೃದ್ಧಿಯನ್ನು ನಾವು ಎಷ್ಟು ಹೊಂದಬೇಕು ಎನ್ನುವುದಕ್ಕಿಂತ ಸಂತುಲಿತ ಜೀವನಕ್ಕಾಗಿ ಬೇಕಾಗುವ ವ್ಯವಸ್ಥೆಯನ್ನು ಅವರು ಮಾಡಿದ್ದರು. ಓದಿದ್ದು ಏಳನೇ ಕ್ಲಾಸಿನವರೆಗೆ ಮಾತ್ರ ಆದರೂ ವ್ಯಾವಹಾರಿಕವಾಗಿ ಯಾವ ಶಿಕ್ಷಿತರಿಗೂ ಕಡಿಮೆ ಇಲ್ಲದಂತೆ ಬದುಕಿದವರು. ಮನೆಯ ಹಿರಿಯ ಮಗನಾಗಿ ಜವಾಬ್ದಾರಿಯನ್ನು ಹೊತ್ತುಕೊಂಡು ತಮ್ಮಂದಿರಿಬ್ಬರಿಗೆ ಮದುವೆ ಮಾಡಿಸಿ, ಜಮೀನಿನ ವ್ಯವಸ್ಥೆ ಮಾಡಿಸಿ ಕೊಟ್ಟರು. ಪಿತ್ರಾರ್ಜಿತವಾಗಿ ಬಂದ ಚಿನ್ನದ ಒಡವೆಗಳನ್ನು ತಮ್ಮಂದಿರಿಗೇ ಬಿಟ್ಟು, ರಾಮನನ್ನು ಆರಾಧಿಸುವ ಸಲುವಾಗಿ ಪರಂಪರಾಗತವಾಗಿ ಬಂದ ರಾಮಟಂಕಿಯಲ್ಲಿ ಒಂದನ್ನು ಮಾತ್ರ ಪೂಜೆಗಾಗಿ ಮನೆಗೆ ತಂದವರು.

 ಹಿರಿಯರು ಕಟ್ಟಿದ ಮೂಲ ಮನೆಯನ್ನು ಕಿರಿಯ ತಮ್ಮನಿಗೆ ಬಿಟ್ಟು ೧೮ ಎಕರೆಯಷ್ಟು ಜಮೀನನ್ನು ಅವನಿಗೆ ಕೊಟ್ಟು ತಾನು ೧೪ ಎಕರೆಯ ಜಮೀನಿನನ್ನು ಇಟ್ಟುಕೊಂಡು ಬೇರೆಯೇ ಹುಲ್ಲಿನ ಮಾಡಿನ ಮನೆಯನ್ನು ಹೊಸದಾಗಿ ಕಟ್ಟಿಕೊಂಡರು. ಅದಕ್ಕೂ ಅನತಿ ಕಾಲದಲ್ಲಿ ಬೆಂಕಿ ಬಿದ್ದಾಗ (ಇಂದಿಗೆ ೫೮ ವರ್ಷಗಳ ಹಿಂದೆ, ಅಂದರೆ ೧೯೬೬ ನೆಯ ಇಸವಿಯಲ್ಲಿ) ಇನ್ನೊಂದು ಆಗಿನ ಕಾಲಕ್ಕೆ ಹಳ್ಳಿಯಲ್ಲಿ ಸುಸಜ್ಜಿತವೆನಿಸಿದ ಮನೆಯನ್ನು ಕಟ್ಟಿಸಿದರು. ಇನ್ನೊಬ್ಬ ತಮ್ಮ ಮುದ್ರಾಡಿಯಲ್ಲಿ ಇದ್ದ ಪಿತ್ರಾರ್ಜಿತ ಜಮೀನನ್ನು ಹೊಂದಲು ಬಯಸದೆ, ಊರಿನಲ್ಲೇ ಕಾಡಿನ ಮಧ್ಯೆ ಪೇರಳ ಎಂಬಲ್ಲಿ ೧೨ ಎಕರೆಯ ಜಮೀನನ್ನು ಹೊಂದಲು ಬಯಸಿದಾಗ ಸಂತೋಷವಾಗಿ ಒಪ್ಪಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.

ಊರಿಗೆ ರಸ್ತೆಯಿಲ್ಲದೆ, ವಾಹನಗಳ ಸೌಕರ್ಯವೇ ಇಲ್ಲದಿದ್ದರೂ ೧೨ ಕಿ.ಮೀ. ದೂರದ ಹೆಬ್ರಿಯಿಂದ ಮನೆಗೆ ಬೇಕಾಗುವ ದಿನಸಿ ಇತ್ಯಾದಿಗಳನ್ನು ಹೇಗೆ ತರುತ್ತಿದ್ದರೋ ಅರ್ಥವಾಗುವುದಿಲ್ಲ. ೧೨ ಕಿ.ಮೀ.  ಕಾಲ್ನಡಿಗೆಯಲ್ಲೇ  ಬರುವಾಗ ಅದೆಷ್ಟು ಭಾರವನ್ನು ಹೊತ್ತುಕೊಂಡು ಬರಬಹುದು ಅಂತ ಊಹಿಸಿದರೆ ಆಶ್ಚರ್ಯವಾಗುತ್ತದೆ. ಈಗ ಶೃಂಗೇರಿಯಲ್ಲಿ ನನ್ನ ವಾಸ. ಅಂಗಡಿಯ ಬುಡಕ್ಕೆ ವಾಹನ ಹೋಗುತ್ತದೆ. ಮನೆಯ ಒಳಗೆಯೇ ವಾಹನ ಬರುತ್ತದೆ. ಆದರೂ ಒಂದು ಕಾರು ಮತ್ತು ಮೂರು ದ್ವಿಚಕ್ರವಾಹನಗಳಿದ್ದರೂ ಅಂಗಡಿಯಿಂದ ತಿಂಗಳ ಸಾಮಾನು(ದಿನಸಿ) ತರುವುದು ನನಗೆ ಸಲೀಸೇನಲ್ಲ.

ದರ್ಶನಪಾತ್ರಿ

ನಮ್ಮ ಊರಿನಲ್ಲಿ ನಮ್ಮ ಕುಟುಂಬದವರೇ ಕಟ್ಟಿಸಿದ ದೇವಸ್ಥಾನ ಲಕ್ಷ್ಮೀನಾರಾಯಣ ದೇವಸ್ಥಾನ. ನಮ್ಮ ಕುಟುಂಬದ ಹಿರಿಯರೇ ಊರಿನ ಪಟ್ಲೇರ್(ಪಟೇಲರು) ಆಗಿದ್ದರಿಂದ ದೇವಸ್ಥಾನ ಕಟ್ಟಿಸುವುದು ಅವರ ಜವಾಬ್ದಾರಿಯಾಗಿತ್ತು ಹಾಗೂ ಅದು ಸುಲಭವೂ ಆಗಿತ್ತು.

ನನ್ನ ತಂದೆಗೆ ಆ ದೇವಸ್ಥಾನದಲ್ಲಿ ದರ್ಶನ ಪಾತ್ರಿಯ ಗೌರವ. ಸನ್ನಡತೆಯ  ಸಾತ್ವಿಕಜೀವನ ನಡೆಸುವ ವ್ಯಕ್ತಿ ಮಾತ್ರ ಇದಕ್ಕೆ ಅರ್ಹ. ದರ್ಶನ ಪಾತ್ರಿಯಾದವನು ದೇವಸ್ಥಾನದ ಎಲ್ಲ ಉತ್ಸವಗಳ ಸಂದರ್ಭದಲ್ಲಿಯೂ ಸಾಪ್ತಾಹಿಕ ಕಠಿನ ದೀಕ್ಷೆ(ಮಡಿಯಲ್ಲಿ ಕೂರುವುದು) ಅನಿವಾರ್ಯ.  ಆ ಸಂದರ್ಭದಲ್ಲಿ  ನಿತ್ಯಕ್ಕಿಂತ ಹೆಚ್ಚುವರಿಯಾಗಿ ಅನುಷ್ಠಾನ ಮಾಡಬೇಕು. ಬೆಳಿಗ್ಗಿನ ಜಾವದಲ್ಲಿ ಆರಂಭಿಸಿದ ಅನುಷ್ಠಾನ ಕಾರ್ಯ ಹತ್ತು ಹನ್ನೊಂದು ಗಂಟೆಯ ತನಕ ನಡೆಯುತಿತ್ತು. ನಂತರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದ ನಂತರ ಮಧ್ಯಾಹ್ನದ ಊಟ. ಬೆಳಿಗ್ಗೆ ತಿಂಡಿಯಿಲ್ಲ ರಾತ್ರಿಯ ಊಟವೂ ನಿಷಿದ್ಧ. ಈ ಸಂದರ್ಭದಲ್ಲಿ ಮನೆಗೆ ಇತರರು ಬರುವಾಗ ಮನೆಯ ಅಂಗಳಕ್ಕೂ ಚಪ್ಪಲಿಯನ್ನುಹಾಕಿಕೊಂಡು ಬರುವುದಿಲ್ಲ. ಅಂಗಳದ ಮೂಲೆಯಲ್ಲೇ ಚಪ್ಪಲಿಯನ್ನು ಬಿಟ್ಟು ಬರುವುದನ್ನು ನಾನು ಯಾವಾಗಲೂ ಗಮನಿಸುತ್ತಿದ್ದೆ.  ಮುಂದೊಂದು ಬಾರಿ ಊರಿನ ಹಸಲರ ಹುಡುಗನಿಗೆ ಸಂಸ್ಕೃತವನ್ನು ಕಲಿಸಿ ನಾಟಕವನ್ನು ಅಭ್ಯಾಸ ಮಾಡಿಸಿ, ಆತ ಮನೆಗೆ ಬಂದಾಗ ನಾನು ಮನೆಯ ಒಳಗೆ ಕರೆದೆ. ನಮ್ಮ ಮನೆಯಲ್ಲಿ ಈ ರೀತಿ ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ ಅಂತ ಪರಿಪರಿಯಾಗಿ ಹೇಳಿದರೂ ಅವನು, ದರ್ಶನ ಪಾತ್ರಿಗಳ ಮನೆಯ ಒಳಗಡೆ ಹೋಗುವುದು ಸೂಕ್ತ ಅಲ್ಲ ಅಂತ ಸ್ಪಷ್ಟವಾಗಿ ಹೇಳಿ ನಿರಾಕರಿಸಿದ.

          ನನ್ನ ತಂದೆ ಯಾವತ್ತೂ ಅಸ್ಪೃಶ್ಯತೆಯನ್ನು ಮಾಡಿದವರಲ್ಲ. ನಂತರ ನನ್ನ ಹಿರಿಯಣ್ಣ ಶಂಕರನಾರಾಯಣ ಹೆಬ್ಬಾರ್ ದರ್ಶನ ಪಾತ್ರಿಯಾದ ಮೇಲೂ, ಪೌರೋಹಿತ್ಯದಿಂದ ಸಮಯ ಕಳೆಯುತ್ತಿದ್ದರೂ ಅಸ್ಪೃಶ್ಯತೆಯನ್ನು ಯಾವತ್ತೂ ಒಪ್ಪಿದವನಲ್ಲ. ಹಾಗಿದ್ದರೂ ಯಾರೂ ಅವನ ಜೊತೆಗೆ ಸರಿಸಮನಾಗಿ ಕುಳಿತು ಅಥವಾ ಪಕ್ಕದಲ್ಲಿ ಕುಳಿತು ಆಹಾರಾದಿಗಳನ್ನು ಸೇವಿಸುವ ಯೋಚನೆಯನ್ನು ಕೂಡ ಮಾಡಿಲ್ಲ. ಯಾಕೆಂದರೆ ನನ್ನ ಅಪ್ಪ ಹೋಟೇಲ್ ನಲ್ಲಿ ಯಾವತ್ತೂ ಆಹಾರ ಸೇವಿಸಿದವರಲ್ಲ. ಹೋಟೇಲಿನಲ್ಲಿ ಆಹಾರ ಸೇವಿಸಿ ಕಾರ್ಯಕ್ರಮಾದಿಗಳಲ್ಲಿ ಕಪಟ ಮಡಿವಂತಿಕೆಯನ್ನು ಮಾಡುವ ಇತರೆ ಕೆಲವರಂತೆ ಅವರಿರಲಿಲ್ಲ.

ಗಿಡ ನೆಡುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು.

ಪ್ರತಿ ಹುಣ್ಣಿಮೆಗೆ ಶ್ರೀಚಕ್ರಪೂಜೆಗಾಗಿ ಉಡುಪಿಯ ಶ್ರೀಪತಿ ತಂತ್ರಿಗಳ ಮನೆಗೆ ಹೋಗುತ್ತಿದ್ದರು

ಪ್ರತಿದಿನ ನೈವೆದ್ಯದ ಬೆಳ್ತಿಗೆ ಅನ್ನದ ಲಡ್ಡುಕಗಳನ್ನು ಸಣ್ಣ ಮಕ್ಕಳೆಲ್ಲರಿಗೂ ಕೊಡುತ್ತಿದ್ದರು.

ಪ್ರತಿವರ್ಷ ಚಂಡೀಹೋಮ, ರಾಮನವಮಿ, ಆಷಾಡದಲ್ಲಿ ದುರ್ಗಾ(ಸಪ್ತಶತೀ)ಪೂಜೆ ಮಾಡಿಸಿ ನೂರಾರು ಜನರಿಗೆ ಊಟ ಹಾಕುತ್ತಿದ್ದರು. (ಈಗಲೂ ಅವು ನಮ್ಮ ಅಣ್ಣನವರ ಉಸ್ತುವಾರಿಯಲ್ಲಿ ನಡೆಯುತ್ತವೆ.)

ಪ್ರತಿವರ್ಷ ಕೊಡಚಾದ್ರಿಗೆ ಹೋಗಿ ಎರಡು ಮೂರು ದಿನ ಧ್ಯಾನ ಮಾಡಿ ಬರುತ್ತಿದ್ದರು.