ಹುಟ್ಟು ಗುಣ ಘಟ್ಟ ಹತ್ತಿದ್ರೂ ಬಿಡೋದಿಲ್ಲ, ನಾಯಿ ಬಾಲ ಡೊಂಕು, ನಾಯೀನ ಪಲ್ಲಕೀಲಿ ಕೂರ್ಸಿದ್ರೆ ಹೇಲ್ ಕಂಡ್ರೆ ಹಾರದೆ ಇರುತ್ತದೆಯೇ ? ಅಂತ ಕೆಲವು ಗಾದೆ ಗಳು ಇವೆ.
೨೦೨೧ ನೆ ಇಸವಿಯ ಎಪ್ರಿಲ್ ತಿಂಗಳಿನಲ್ಲಿ ನಮ್ಮ ಪರಿಸರದ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ನಮ್ಮ ಪರಿಸರದ ಆಗಿನ ನಿರ್ದೇಶಕರಾದ ಸುಬ್ರಾಯಭಟ್ಟರ ವಿರುದ್ಧವಾಗಿ
ಸ್ಟ್ರೈಕ್ ಮಾಡುವಾಗ ಕೊನೆ ಘಳಿಗೆಯಲ್ಲಿ ಸುಬ್ರಾಯಭಟ್ಟರಿಂದ ಪ್ರೆರಿತರಾದ ಪೋಲೀಸಿನವರ ಆಘಾತಕಾರಿ
ಮಾತುಗಳಿಂದ ಉದ್ರಿಕ್ತಗೊಂಡು ಎರಡು ವರ್ಷಗಳ ಹಿಂದೆ ಲೈಂಗಿಕ ಕಿರುಕುಳ ಕೊಟ್ಟಿದ್ದಕ್ಕಾಗಿ ಭಾಗ್ಯಶ್ರೀ ಜಾನಾ ಎಂಬ ಉತ್ತರ ಕರ್ನಾಟಕದ ಹುಡುಗಿ ಲಿಖಿತವಾಗಿ
ವಿ,ಸಿ.ಯವರಿಗೆ ಕಂಪ್ಲೆಂಟ್ ಕೊಟ್ಟು ಫೋನ್ ನಲ್ಲಿ ಮಾತಾಡಿದ್ಮೇಲೆ ನಿರ್ದೇಶಕ ಸ್ಥಾನದಿಂದ ಉಚ್ಛಾಟಿಸಲ್ಪಟ್ಟ
ಬಳಿಕ -
ಈಗ ಮೂರ್ನಾಲ್ಕು ತಿಂಗಳಿನಿಂದ ಪುನಃ ವಾಮಮಾರ್ಗದಿಂದ ನಿರ್ದೆಶಕಸ್ಥಾನವನ್ನು ಗಿಟ್ಟಿಸಿಕೊಂಡ
ಸುಬ್ರಾಯ ಭಟ್ಟರು ಏನೂ ಬದಲಾಗಿಲ್ಲ ಎನ್ನುವುದಕ್ಕೆ ಹಲವಾರು ಪುರಾವೆಗಳು ದೊರೆಯುತ್ತಿವೆ.
ಅದರಲ್ಲಿ ಒಂದು ನಿನ್ನೆ ನಾನು ರವೀಶರ ಹತ್ರ ಫೋನ್ ಮಾಡುವಾಗ ಸಿಕ್ಕ ಮಾಹಿತಿ.
ಸ್ವತಃ ಸುಬ್ರಾಯಭಟ್ಟರೇ ಅವರ ಮನೆಯವರ ಮುಖಾಂತರ Outlook ನಲ್ಲಿ ಒಂದು ಫೇಕ್ ಐ.ಡಿ. ಕ್ರಿಯೇಟ್ ಮಾಡಿದ್ರು. ಅದೂ ಅವ್ರ ಹೆಸರಲ್ಲಿ ಅಲ್ಲ. ಶಾಸ್ತ್ರಿ
ತೃತೀಯವರ್ಷದಲ್ಲಿ ಓದುತ್ತಿರುವ ಶಾರದಾ ಎನ್ ರಾವ್ ಎಂಬ ವಿದ್ಯಾರ್ಥಿನಿಯ ಹೆಸರಲ್ಲಿ. ನಂತರ ಆ ಫೇಕ್
ಐ.ಡಿ. ಇಂದ ಒಂದು ಮೇಲ್ ಈ ಕ್ಯಾಂಪಸ್ ನ ಡೈರೆಕ್ಟರ್ ಐ.ಡಿ ಗೆ ಶಾರದಾ ಎನ್. ರಾವ್ ಹೆಸರಲ್ಲಿ ಒಂದು
ಕಂಪ್ಲೆಂಟ್ ಕಳಿಸಿದರು. ಅದು ಯಾರ ವಿರುದ್ಧವಾಗಿ
? ನಮ್ಮ ಕ್ಯಾಂಪಸ್ ನಲ್ಲಿ ಅತ್ಯಂತ ಸಕ್ರಿಯರಾಗಿ ಅತಿ ಹೆಚ್ಚು ಕೆಲಸ ಮಾಡುವ ರವೀಶರ ವಿರುದ್ಧವಾಗಿ.
ಅದೂ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಅಂತ.
ಈ ವಿಷಯವನ್ನು ರವೀಶರನ್ನು ಕರೆಸಿ ಅವರಿಗೆ ಹೇಳಲಾಯಿತು. ಆ ಬಳಿಕ ಸಮಾಧಾನ ಹೇಳಲಾಯಿತು “ಎನೂ
ಚಿಂತೆ ಮಾಡ್ಬೇಕಾದದ್ದಿಲ್ಲ. ನಾನು ಅವಳನ್ನು ಕರೆದು ವಿಚಾರಿಸ್ತೇನೆ, ಅವಳ ತಂದೆಯವರ ಹತ್ರನೂ ಮಾತಾಡ್ತೇನೆ”
ನಂತರ ಹೀಗೆ ಹೇಳಲಾಯಿತು – “ನಾನು ಅವರನ್ನು ಕರೆದು ವಿಚಾರಿಸಿದೆ. ಆ ಮೇಲ್ ಅವಳು ಕಳಹಸಿದ್ದಲ್ಲವಂತೆ.
ಅದು ಯಾರೊ ಫೇಕ್ ಐ.ಡಿ. ಕ್ರಿಯೇಟ್ ಮಾಡಿ ಹೀಗೆ ಮೇಲ್ ಮಾಡಿದ್ದಿರಬಹುದಂತೆ. ಅವರೇ (ಡಾ. ನರಸಿಂಹ ರಾವ್)
ಲಿಖಿತವಾಗಿ ಒಂದು ಪತ್ರ ಕೊಟ್ಟಿದ್ದಾರೆ. ಹಾಗಾಗಿ ನೀವೇನೂ ಚಿಂತೆ ಮಾಡ್ಬೇಕಾದದ್ದಿಲ್ಲ.”
ರವೀಶರು ಆ ಮೇಲ್ ಮತ್ತು ನಂತರ ಡಾ. ನರಸಿಂಹ ರಾವ್ ಕೊಟ್ಟರು ಎಂದು ಹೇಳಿದ ಪತ್ರದ ಪ್ರತಿಯನ್ನು
ಕೇಳಿ ತೆಗೆದುಕೊಂಡರು. ಬಳಿಕ ರವೀಶರು ಒಂದು ಮಾತು ಹೆಳಿದ್ರು – “ನನಗೆ ಸೈಬರ್ ಸ್ಪೆಶಲಿಷ್ಟಗಳ ಪರಿಚಯ
ಇದೆ. ಯಾತಕ್ಕೂ ನಾನು ಒಂದು ಬಾರಿ ಅವರ ಹತ್ರ ವಿಚಾರಿಸ್ತೇನೆ”
“ಯಾ.. ಯಾ.. ಯಾಕೆ ? ಹಾಗೇನೂ ಮಾಡಬೇಕಾಗಿಲ್ಲ. ನಾನು ಎಲ್ಲ ವಿಚಾರಿಸಿ ಆಗಿದೆ. ಇನ್ನೇನೂ
ಸಮಸ್ಯೆ ಇಲ್ಲ. ನೀವೇನೂ ಹಾಗೆ ಮಾಡ್ಬೇಡಿ. ಆ ಫೇಕ್ ಮೇಲ್ ಐ.ಡಿ. ಒಂದು ವಾರದ ನಂತರ ಸ್ವತಃ ಡಿಲೀಟ್
ಆಗಿ ಹೋಗುತ್ತದೆ.” ಇತಿ ಸುಬ್ರಾಯ(ಯಾಃ) ಉವಾಚ(ಊಚುಃ).
ಹಾಗಾದ್ರೆ ಡಾಕ್ಟ್ರು ಕೊಟ್ಟ ಆ ಪತ್ರದಲ್ಲಿ ಎನಿದೆ ?
ಮೊದಲಿನ ಪ್ಯಾರಾದಲ್ಲಿ ಸಹಜವಾಗಿಯೇ ಆ ಫೇಕ್ ಐ.ಡಿ ನಮ್ಮದಲ್ಲ. ನಾವು/ನನ್ನ ಮಗಳು ಆ ಮೇಲ್
ಕಳುಹಿಸಿದ್ದಲ್ಲ .ಇತ್ಯಾದಿ ಇತ್ಯಾದಿ.
ಎರಡನೇ ಪ್ಯಾರಾದಲ್ಲಿ –
ಈ ಸುಬ್ರಾಯ ಭಟ್ಟರು ಬಹಳ ಒಳ್ಳೆಯವರು. ತುಂಬ ಚೆನ್ನಾಗಿ ಪರಿಸರವನ್ನು ನಡೆಸಬಲ್ಲರು ಇತ್ಯಾದಿ
ಇತ್ಯಾದಿ.
ಈಗ ಸಂದೇಹ ಎನಂದ್ರೆ –
ಸುಬ್ರಾಯ ಭಟ್ಟರು ಶಾರದಾಳನ್ನು ಅಥವಾ ಅವಳ ತಂದೆಯನ್ನು ವಿಚಾರಿಸಿದ್ದು ಯಾವಾಗ. ?
ಲೈಂಗಿಕ ಕಿರುಕುಳದ ವಿಷಯವಾಗಿದ್ದರಿಂದ ಸಂಬಂಧಿಸಿದ ಸಮಿತಿಯ(Woman’s Welfare Committee…) ಮೂಲಕ ಲಿಖಿತ ಪತ್ರದ ಮೂಲಕ ಡಾಕ್ಟ್ರನ್ನು ಯಾಕೆ ಕರೆಸಲಿಲ್ಲ ?
ಶಾರದಾಳನ್ನು ಒಬ್ಬಳನ್ನೇ ಕರೆದು ವಿಚಾರಿಸಿದರೇ ?
ತಂದೆ ಮಗಳಿಂದ ಸ್ಪಷ್ಟನೆ ಸಿಕ್ಕಿದ ಬಳಿಕ ಡಾಕ್ತ್ರು ಕೊಟ್ರು ಅಂತ ಹೇಳಿದ
ಪತ್ರ ಬರೆದದ್ದು ಯಾರು ?
ಸುಬ್ರಾಯಭಟ್ಟರ ಕುರಿತಾದ ಹೊಗಳಿಕೆಯ ಅಪ್ರಾಸಂಗಿಕ ಮಾತುಗಳು ಪತ್ರದಲ್ಲಿ
ಯಾಕೆ ಇವೆ ?
ಅದನ್ನು ಸುಬ್ರಾಯರೇ ಯಾಕೆ ಬರೆದಿರಬಾರದು ?
ಫೇಕ್ ಐ.ಡಿ ಯನ್ನು ಕ್ರಿಯೇಟ್ ಮಾಡಿ ಅದರಿಂದ ಒಬ್ಬ ಪ್ರಾಮಾಣಿಕ ಪರಿಶ್ರಮಿ
ಸಮರ್ಪಿತ ಅಧ್ಯಾಪಕನ ವಿರುದ್ಧವಾಗಿ ಲೈಂಗಿಕ ಕಿರುಕುಳದ ಪತ್ರವನ್ನು ಬರೆದು, ವಿಚಾರಣೆಯ ನಾಟಕವಾಡಿ,
ಡಾಕ್ತ್ರು ಸ್ಪಷ್ಟೀಕರಣ ಕೊಟ್ಟಿದ್ದಾರೆ ಅಂತ ಫೇಕ್ ಲೆಟರನ್ನು ಆತ್ಮಪ್ರಶಂಶೆಗಾಗಿ ಬರೆಸಿ ಅದರ ಪ್ರತಿಯನ್ನು
ವಿ.ಸಿ.ಗೆ ಕಳುಹಿದ್ದು ಯಾವ ಉದ್ದೇಶಕ್ಕಾಗಿ ?
ಈ ರೀತಿಯಾಗಿಯೇ ಹಿಂದೆ ಯೋಗ ಅಧ್ಯಾಪಕ ರವಿ ಶಾಸ್ತ್ರಿಯ ವಿರುದ್ಧವಾಗಿ
ಕೂಡ ಇದೇ ಸುಬ್ರಾಯರು ಫೇಕ್ ಐ.ಡಿ. ಕ್ರಿಯೇಟ್ ಮಾಡಿ ಹೆಣ್ಣು ಮಕ್ಕಳ ಹೆಸರಲ್ಲಿ ಕಂಪ್ಲೆಂಟ್ ನ್ನು
ದೈರೆಕ್ಟರ್(ತನಗೇ) ಗೆ ಬರೆಸಿಕೊಂಡಿದ್ದೂ ಇದೆ.
ಈ ಮನುಷ್ಯ ತನ್ನ ಸೀಟ್ನಲ್ಲಿ ಭದ್ರವಾಗಿ ಉಳಿಯುವುದಕ್ಕೆ, ತನಗಾಗದಿರುವವರನ್ನು
ಮಟ್ಟ ಹಾಕುವುದಕ್ಕೆ ಎಂತಹ ನೀಚ ಕೆಲಸ ಮಾಡಲೂ ಹೇಸುವುದಿಲ್ಲ ಎಂಬುವುದಕ್ಕೆ ಬೇರೆ ಸಾಕ್ಷಿ ಬೇಕೇ ?
ಇದೇ ರೀತಿ ಮುಂದಿನ ದಿನಗಳಲ್ಲಿ ಫೇಕ್ ಈಮೇಲ್ ಐ.ಡಿ.ಗಳ ಪ್ರಯೋಗ ಎಷ್ಟು
ಅಧ್ಯಾಪಕರ ಮೇಲೆ ಆಗುವುದಿದೆಯೋ ದೇವರೆ ಬಲ್ಲ.
ವೀ.ಸಿ ಯವರಿಗೂ ಅದೇನು ಅನಿವಾರ್ಯತೆಯೋ ಗೊತ್ತಾಗುವುದಿಲ್ಲ. ಇಂತಹ ಅಧಮಾಧಮರನ್ನು
ಸೀಟಿನಲ್ಲಿ ಕೂರಿಸಿದರೆ ಸಂಸ್ಥೆಯ ಗತಿ ಏನಾಗಬೇಕು
? ದೇವರೇ ಗತಿ.
No comments:
Post a Comment